ಕ್ರೈಂ ನ್ಯೂಸ್
ಸಿಲಿಂಡರ್ ಸ್ಟೋಟ
ಸುದ್ದಿಲೈವ್/ಶಿವಮೊಗ್ಗ
ಗೋಪಾಳಗೌಡ ಬಡಾವಣೆಯ ಕೃಷ್ಣಮಠದ ಪಾರ್ಕ್ ಹತ್ತಿರದ ಮನೆಯಲ್ಲಿ ರಡು ಸಿಲಿಂಡರ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಇಂದು ಬೆಳಗ್ಗೆ 11:15ಕ್ಕೆ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ ವಾಗಿದೆ.
ಈ ಒಂದು ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಗಳ ಅಡುಗೆ ಮನೆ ಜಖಮ್ ಆಗಿರುತ್ತದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಒಡೆದು ಹೋಗಿರುತ್ತದೆ. ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದ ಡಿಎಫ್ ಒ ಮಹಾಲಿಂಗಪ್ಪನವರ ನೇತೃತ್ವದಲ್ಲಿ ತುರ್ತು ಕಾರ್ಯಾಚರಣೆ ನಡೆದಿದೆ. ಸ್ಥಳೀಯ ಠಾಣಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.