ರಾಜಕೀಯ ಸುದ್ದಿಗಳು
ಗ್ಯಾರೆಂಟಿ ಯೋಜನೆಗೆ ಚಾಲನೆ
ಸುದ್ದಿಲೈವ್/ಶಿವಮೊಗ್ಗ
ಗ್ಯಾರೆಂಟಿ ಯೋಜನೆಗಳ ಜಿಲ್ಲಾಮಟ್ಟದ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿಕೆಶಿ ಚಾಲನೆ ನೀಡಿದರು. ಈ ವೇಳೆ ಗ್ರಾಮಾಂತರ ಭಾಗ್ಕೆ ಕೆಎಸ್ ಆರ್ ಟಿಸಿಯ 10 ಬಸ್ ಗಳಿಗೆ ಚಾಲನೆ ನೀಡಿದರು.
ಇಂದು ಬೆಳಿಗ್ಗೆ ಇಂಡಿಗೋದಲ್ಲಿ ಶಿವಮೊಗ್ಗಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳಿಸಿದ ಉಪಮುಖ್ಯಂತ್ರಿ ಸರಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 11 ಗಂಟೆಗೆ ಲ್ಯಾಂಡ್ ಆಗಿದ್ದಾರೆ. ನಂತರ ಕಾರ್ಯಕರ್ತರೊಂದಿಗೆ ಅಲ್ಲಮನ ಫ್ರೀಡಂ ಪಾರ್ಕ್ ಗೆ ಆಗಮಿಸಿದರು.
ಪ್ರೀಡಂ ಪಾರ್ಕ್ ಗೆ ಅಲ್ಲಮನ ನಾಮಕರಣ ಮಾಡಿದ ಬೆನ್ನಲ್ಲೇ 800 ವಚನಗಳ ನಾಮಪಲಕಗಳನ್ನ ಅಳವಡಿಸಲಾಗಿದೆ. ಪಾಲಿಕೆ ವತಿಯಿಂದ ಈ ನಾಮಫಲಕ ಅಳವಡಿಸಲಾಗಿದೆ. ನಂತರ ಸಿಂಗಾರ ಹೂವನ್ನ ಅರಳಿಸುವ ಮೂಲ ಚಾಲನೆ ನೀಡಲಾಯಿತು.
ಇದನ್ನೂ ಓದಿ-https://suddilive.in/archives/9502