ಡಕಾಯಿತಿಗೆ ಹೊಂಚು ಹಾಕುತ್ತಿದ್ದವರು ಅಂದರ್
ಸುದ್ದಿಲೈವ್/ಶಿವಮೊಗ್ಗ
ಬ್ಯಾಟ್ (ಮಚ್ಚು) ಹಿಡಿದು ಡಕಾಯಿತಿಗಾಗಿ ಹೊಂಚು ಹಾಕುತ್ತಿದ್ದ ಐವರ ಪೈಕಿ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರದ ಮುಸೇಬ್ ಯಾನೆ ತಿಬ್ಬಲ್, ಕೆಳಗಿನ ತುಂಗ ನಗರದ ತೌಸಿಫ್ ಯಾನೆ ಸೋನು ಎಂಬುವರು ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದು ಮೂವರು ಪರಾರಿಯಾಗಿದ್ದಾರೆ.
ಗಾಡಿಕೊಪ್ಪದ ಹರ್ಷ ಫರ್ನ್ ನಿಂದ ಪುರದಾಳ್ ಗೆ ಹೋಗುವ ರಸ್ತೆಯಲ್ಲಿ ಐದು ಜನ ಯುವಕರು ಅನುಮನ ಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಮೊನ್ನೆ ಮಧ್ಯರಾತ್ರಿ ಸುಮಾರಿಗೆ 11-30 ರ ಸಮಯದಲ್ಲಿ ಈ ಘಟನೆ ನಡೆದಿದೆ.
ತುಂಗ ನಗರ ಪೊಲೀಸರಿಗೆ ಬಂದ ಪಕ್ಕಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಮೂವರಾದ ಜಮೀರ್ ಅಹಮದ್, ಹಜ್ರತ್ ಹುಮಾನ್, ಜಾಫರ್ ಸಾಧಿಕ್ ಎಂಬುವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮುಸೇಬ್ ಯಾನೆ ತಿಬ್ಬಲ್ ಎಂಬ ಯುವಕ ಬ್ಯಾಟ್ ಹಿಡಿದುಕೊಂಡು ನಿಂತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸಿಕ್ಕಿಬಿದ್ದ ಮುಸೇಬ್ ಮತ್ತು ಸೋನುನನ್ನ ವಿಚಾರಿಸಿದಾಗ ಡಕಾಯಿತಿಗಾಗಿ ಮಾರಕಾಸ್ತ್ರ ಮತ್ತು ಖಾರದ ಪುಡಿ ಹಿಡಿಕೊಂಡಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ. ಇಬ್ಬರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/9489