ಕ್ರೈಂ ನ್ಯೂಸ್

ಅಸ್ವಾಭಾವಿಕ ಸಾವು ಎಂದು ದಾಖಲಾಗಿದ್ದ ಪ್ರಕರಣ ಕೊಲೆ ಎಂದು ಸಾಭೀತು!

ಸುದ್ದಿಲೈವ್/ಭದ್ರಾವತಿ

ಡಿಸೆಂಬರ್ ತಿಂಗಳ ಕೊನೆಯಲ್ಲಿ ಭದ್ರಾವತಿಯ ಸೀಗೆಬಾಗಿಯ ಈಶ್ವರ ದೇವಸ್ಥಾನದ ಬಳಿ ಅಪರಿಚಿತ ಮೃತ ದೇಹವೊಂದು ಪತ್ತೆಯಾಗಿದ್ದು ಈ ಪ್ರಕರಣ ಈಗ ತಿರುವು ಪಡೆದುಕೊಂಡಿದೆ. ಪತ್ನಿ ಮತ್ತು ಪುತ್ರನಿಂದಲೇ ತಂದೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಸೊರಬ ತಾಲೂಕಿನ ಯಲವಾಲ ಗ್ರಾಮದ ನಿವಾಸಿಯಾಗಿದ್ದ ಮೌನೇಶಪ್ಪ(50) ಎರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ಮಂಜುಳಾರವರ ಜೊತೆಗಿದ್ದ ಮೌನೇಶಪ್ಪ ಬ್ಯಾಡಗಿ ತಾಲೂಕಿನ ಮಸಣಗಿಯಲ್ಲಿ ವಾಸವಾಗಿದ್ದರು. ಎರಡನೇ ಪತ್ನಿಗೆ ಎರಡು ಮಕ್ಕಳು ಮತ್ತು ಮೊದಲನೇ ಹೆಂಡತಿ ಮಂಜುಳಾರಿಗೆ ಶಂಭು ಎಂಬ ಮಗನಿದ್ದನು.

ಪತ್ನಿ ಮಂಜುಳಾ ಮತ್ತು ಮೌನೇಶಪ್ಪ ನಡುವೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಮೌನೇಶಪ್ಪ ಜಗಳವಾದಾಗ ಮನೆಬಿಟ್ಟು ಹೋಗುವುದು ಮತ್ತು ವಾಪಾಸಾಗುವುದು ಮಾಮೂಲಿಯಾಗಿತ್ತು. ಜಗಳದ ಕುರಿತು ಮೌನೇಶಪ್ಪ ತನ್ನ ಅಳಿಯ ರಾಜಶೇಖರ್ ಮಲ್ಲಪ್ಪ ಕಬ್ಬೂರು ಬಳಿ ಹೇಳಿಕೊಂಡಿದ್ದರು.

ಯಾವಾಗ ಒಂದು ವರ್ಷದಿಂದ ಮನೆಗೆ ವಾಪಾಸ್ ಆಗದ ಮೌನೇಶಪ್ಪನ ಅಳಿಯ ರಾಜಶೇಖರ್ ಮಲ್ಲಪ್ಪ ಕಬ್ಬೂರು ಮತ್ತೋರ್ವ ಮಾವ ಕರೆ ಮಾಡಿ ಕೇಳಿದಾಗ ಮಂಜುಳಮ್ಮ ಏರು ಧ್ವನಿಯಲ್ಲಿ  ಪದೇ ಪದೇ ಕರೆ ಮಾಡಬೇಡಿ ಎಂದು  ತಿಳಿಸಿರುತ್ತಾರೆ.

ಇತ್ತ ಮಂಜುಳ ಮತ್ತು ಶಂಭು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪತಿ ಮೌನೇಶಪ್ಪ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಇತ್ತ ಭದ್ರಾವತಿಯ ಸೀಗೆಬಾಗಿ ಈಶ್ವರ ದೇವಾಲಯದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿರುತ್ತದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಅಪರಿಚಿತ ಶವ ಪತ್ತೆಯಾದ ಬೆನ್ನಲ್ಲೇ ಯುಡಿಆರ್ ದಾಖಲಿಸಿಕೊಂಡಿದ್ದರು.

ಬ್ಯಾಡಗಿ ಪೊಲೀಸರು ನಾಪತ್ತೆ ಪ್ರಕರಣ ಬೆನ್ನುಹತ್ತಿಕೊಂಡು ಬಂದು ಪ್ರಕರಣ ಬೇಧಿಸಿದ್ದಾರೆ. ಮಂಜುಳ ಮತ್ತು ಪುತ್ರ ಶಂಭು ಇಬ್ಬರು ಆರೋಪಿಗಳು ಆಯನೂರಿನಲ್ಲಿ ಕೆಲಸಕ್ಕೆ ಬಂದಿದ್ದು ಅಲ್ಲೊಬ್ಬ ಎಳನೀರು ಕೊಚ್ಚುವ  ಶಿವರಾಜ್ ಎಂಬುವನ ಸಹಾಯದಿಂದ ಮೌನೇಶಪ್ಪನ ಕೊಲೆ ಮಾಡಿರುವುದು ಪತ್ತೆಯಾಗಿದೆ. ಮಂಜುಳ, ಪುತ್ರ ಶಂಭು ಹಾಗೂ ಶಿವರಾಜ್ ಎಂಬುವರನ್ನ ಬಂಧಿಸಲಾಗಿದೆ.

ಇದನ್ನೂ ಓದಿ-https://suddilive.in/archives/6337

Related Articles

Leave a Reply

Your email address will not be published. Required fields are marked *

Back to top button