ನಾನು ಶಿವಮೊಗ್ಗದ ಮಗಳು ನನಗೂ ಸಂಸದಳಾಗಲು ಅವಕಾಶ ಮಾಡಿ ಕೊಡಿ-ಗೀತ ಶಿವರಾಜ್ ಕುಮಾರ್
ಸುದ್ದಿಲೈವ್/ಶಿವಮೊಗ್ಗ
ಕುಂಚೇನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಭರ್ಜರಿ ಮತಯಾಚಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗಿಯಾಗಿದ್ದ ಗೀತ ಶಿವರಾಜ್ ಕುಮಾರ್ ಸರ್ಕಾರದ ಗ್ಯಾರೆಂಟಿ ಹಾಗೂ ಶಿವಮೊಗ್ಗದ ಮಗಳು ಎಂಬ ಟ್ರಂಪ್ ಕಾರ್ಡ್ ಉರುಳಿಸಿದ್ದಾರೆ.
ನಮ್ಮ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಬರಗಾಲದ ಪರಿಸ್ಥಿತಿಯಲ್ಲಿ ತುಂಬಾ ಅನುಕೂಲ ಆಗಿದೆ. ಚುನಾವಣೆ ನಂತರ ಪ್ರತಿ ಮಹಿಳೆಗೆ ಒಂದು ಲಕ್ಷ ಹಣ ಕೊಡ್ತಾರೆ. ನನ್ನ ತಮ್ಮ ಜನರ ಸೇವೆ ಮಾಡಬೇಕು. ಹಾಗಾಗಿ ನೀವು ಗೆಲ್ಲಿಸಿ ಸಚಿವರನ್ನಾಗಿ ಮಾಡಿದ್ದೀರಿ. ಹಾಗೆ ನನ್ನನ್ನೂ ಸಂಸದೆಯಾಗಲು ಅವಕಾಶ ಮಾಡಿಕೊಡಿ ನಿಮ್ಮ ಸೇವೆ ಮಾಡ್ತೀನಿ ಎಂದರು.
ನಾನು ಶಿವಮೊಗ್ಗ ಜಿಲ್ಲೆಯ ಮಗಳು. ಹಾಗಾಗಿ ಹೇಗೆ ಕೆಲಸ ಮಾಡುತ್ತೇನೆ ಅಂತ ನೋಡಬೇಕಾದ್ರೆ ಒಂದು ಅವಕಾಶ ಕೊಡಿ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ರೈತರ ಸಮಸ್ಯೆಗಳು ಸಾಕಷ್ಟಿವೆ. ನಮ್ಮ ಸರ್ಕಾರ ಸಂಪೂರ್ಣ ಸಾಲ ಮನ್ನಾ ಮಾಡುವ ಯೋಜನೆ ತರುತ್ತಿದೆ ಎಂದರು.
ರೈತರಿಗೆ ಬೆಲೆಗಳಿಗೆ ಬೆಂಬಲ ಬೆಲೆ ಸಿಗಬೇಕಿದೆ. ಮತ ನೀಡಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.
ಇದನ್ನೂ ಓದಿ-https://suddilive.in/archives/12437