ಕ್ರೈಂ ನ್ಯೂಸ್

ಶಿರಾಳಕೊಪ್ಪ ಘಟನಾಸ್ಥಳಕ್ಕೆ ಎಸ್ಪಿ ಭೇಟಿ-ಪರಿಶೀಲನೆ

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಉಂಟಾದ ಸಿಡಿಮದ್ದು ಸ್ಪೋಟಗೊಂಡ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ.ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಬೆಳಿಗ್ಗೆ ಶಿರಾಳಕೊಪ್ಪದ ಬಸ್ ನಿಲ್ದಾಣ ಬ್ಲಾಂಕೇಟ್ ವ್ಯಾಪಾರಿಯ ಬಳಿ ಬಂದ ಇಬ್ಬರು ಪರಿಚಿತ ವ್ಯಕ್ತಿಗಳು ಸಂತೆಗೆ ಹೋಗಬೇಕಿದೆ ಬ್ಯಾಗ್ ಇಟ್ಟುಕೊ ಎಂದು ಹೇಳಿ ಬ್ಯಾಗ್ ಕೊಟ್ಟು ಹೋಗಿದ್ದರು.

ಬ್ಯಾಗ್ ಕೊಟ್ಟು ಹೋದ ಬೆನ್ನಲ್ಲೇ  ಸಿಡಿಮದ್ದು ಸ್ಪೋಟಗೊಂಡಿದೆ. ಈಗಾಗಲೇ ಬ್ಯಾಗ್ ಕೊಟ್ಟು ಹೋದವರ ಪತ್ತೆಯಾಗಿದ್ದು, ಅವರು ಹಾವೇರಿ ಜಿಲ್ಲೆಯ ನುವಾಸಿಗಳಾದರೂ ಶಿರಾಳಕೊಪ್ಪದಲ್ಲಿ ಬಂದು ನೆಲೆಸಿರುವುದಾಗಿ ಹೇಳಲಾಗುತ್ತಿದೆ.

ರೂಪಾ ಉಮೇಶ್ ಗೊಲ್ಲರ್ ಮತ್ತು ಪತಿ ಉಮೇಶ್ ಯಲ್ಲಪ್ಪ ಗೊಲ್ಲರ್ ಕೃಷಿಕಯಾಗಿದ್ದಾರೆ.  ಇವರನ್ನ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಬಹುತೇಕ ಸಿಡಿಮದ್ದುಗಳು ಈ ತರಹ ಎಲ್ಲಾಯಿತೋ ಅಲ್ಲಿ ಸಿಡಿಯುವ ಸಾಧ್ಯತೆ ಇರುವುದರಿಂದ ಸಾಗಾಣಿಕೆ ನಿಷೇಧಿಸಲಾಗಿದೆ. ಆದರೂ ದಂಪತಿಗಳು ಸಾಗಾಣಿಕೆ ಮಾಡಿರುವುದರಿಂದ ಬಂಧನದ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/9223

Related Articles

Leave a Reply

Your email address will not be published. Required fields are marked *

Back to top button