ಕ್ರೈಂ ನ್ಯೂಸ್

ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಪೋಟ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪ  ಸ್ಫೋಟವೊಂದು ಸಂಭವಿಸಿದೆ. ಸ್ಪೋಟದ ಬೆನ್ನಲ್ಲೆ ಎಸ್ಪಿ ಮಿಥುನ್ ಕುಮಾರ್ ಇದು ಪ್ರಾಣಿಗಳಿಗೆ ಬಳಸುವ ಸಿಡಿಮದ್ದು ಸ್ಪೋಟ ಎಂದು ಸ್ಪಷ್ಟಪಡಿಸಿದ್ದಾರೆ.

ಬಸ್ ನಿಲ್ದಾಣ ಬಳಿ ರಸ್ತೆಯ ಪುಟ್ ಪಾತ್ ನಲ್ಲಿ ರಗ್ಗು ಮರುತ್ತಿದ್ದ ವ್ಯಕ್ತಿಯ ಬಳಿ ಮೂವರು ಪರಿಚಯಸ್ತರು ಬಂದಿದ್ದಾರೆ. ಮೂವರ ನಂತರ ಬಂದ ರೂಪ ಉಮೇಶ್ ಗೊಲ್ಲರ್ ಮತ್ತು ಉಮೇಶ್ ಗೊಲ್ಲರ್ ಬಂದು  ಬ್ಯಾಗ್ ಇಟ್ಟಿದ್ದಾರೆ. ಬ್ಯಾಗು ಸ್ಪೋಟಗೊಂಡಿದೆ. ಎಸ್ಪಿ ಅವರು ಸಿಡಿ ಮದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಬ್ಲಾಸ್ಟ್ ನ ತೀವ್ರತೆಯಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಆಂಥೋಣಿ ದಾಸ್ (50) ಎಂದು ತಿಳಿದುಬಂದಿದೆ. ಮತ್ತೋರ್ವನ ಹೆಸರು ಪತ್ತೆಯಾಗಬೇಕಿದೆ.

ಗಾಯಾಳುಗಳು ಶಿಕಾರಿಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಕಾಏಕಿ ಬ್ಯಾಗ್ ನಲ್ಲಿರುವ ವಸ್ತು ಸ್ಫೋಟಗೊಂಡಿದೆ. ಎಸ್ಪಿ ಸ್ಪಷ್ಟನೆ ಮಾಡುವ ಮೊದಲು ಎಲೆಕ್ಟ್ರಿಕ್ ಸ್ಟೌವ್ ಸ್ಪೊಟವಾಗಿದೆ ಎಂದು ಹೇಳಲಾಗುತ್ತಿತ್ತು. ಸ್ಪೋಟಗೊಂಡಾಗ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಸ್ಥಳಕ್ಕೆ ಶಿರಾಳಕೊಪ್ಪ ಠಾಣೆ ಪೊಲೀಸರ ಭೇಟಿ- ಪರಿಶೀಲನೆ ನಡೆಸಲಾಗುತ್ತಿದೆ.

ಶಿಕಾರಿಗೆ ಬಳಸುವ ಸ್ಫೋಟಕ ವಸ್ತು ಬ್ಲಾಸ್ಟ್ ಆಗಿರುವ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/9216

Related Articles

Leave a Reply

Your email address will not be published. Required fields are marked *

Back to top button