ಕ್ರೈಂ ನ್ಯೂಸ್

ಕಾರಿನಲ್ಲೆ ಬಿಟ್ಟು ಹೋದ ಹಣ, ದಾಖಲೆ ಎರಡು ದಿನಗಳ ನಂತರ ಪತ್ತೆಯಾಗಿದ್ದು ಹೇಗೆ?

ಸುದ್ದಿಲೈವ್/ಶಿವಮೊಗ್ಗ

ಕಾರಿನಲ್ಲಿ ಸಂಚರಿಸುವಾಗ 20 ಸಾವಿರ‌ರೂ. ನಗದು ಮತ್ತು ಅಮೂಲ್ಯವಾದ ದಾಖಲಾತಿಯನ್ನ ಕಳೆದುಕೊಂಡಿದ್ದ ವ್ಯಕ್ತಿಗೆ ಪಶ್ಚಿಮ ಸಂಚಾರಿ ಪೊಲೀಸರು ವಾಪಾಸ್ ಹಿಂದಿರುಗಿಸಿದ ಘಟನೆ ನಡೆದಿದೆ. ಆ ಘಟನೆ ಹೇಗೆ ನಡೆಯಿತು ಅಂತೀರಾ ಇಲ್ಲಿದೆ ಸ್ಟೋರಿ

ದಿನಾಂಕ 09.02.2024 ರಂದು ಪವನ್ ರವರು ಕಡೂರು ಕಡೆಯಿಂದ ಎಲ್ಲೋ ಬೋರ್ಡ್ ನ  ಒಂದು ಕಾರನ್ನು ಹತ್ತಿ ಶಿವಮೊಗ್ಗ ನಗರಕ್ಕೆ ಬಂದು, ಅಶೋಕ ಸರ್ಕಲ್ ನಲ್ಲಿ ಬಂದಿಳಿದಿರುತ್ತಾರೆ.

ಆದರೆ ಕಾರನ್ನು ಇಳಿಯುವಾಗ ಅವರು ತಮ್ಮಲ್ಲಿದ್ದಂತಹ ಒಂದು ಬಾಕ್ಸ್ ಅನ್ನು ಮತ್ತು ಅತೀ ಮುಖ್ಯವಾದ ದಾಖಲೆ, ಹಾಗೂ 20,000 ಹಣವನ್ನು ಬಿಟ್ಟು ಕಾರಿನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು. ಇಳಿದು ಹೋದ ಪವನ್ ಗೆ ನಂತರ ಗೊತ್ತಾಗುತ್ತೆ. ದಾಖಲಾತಿ ಮತ್ತು ಹಣ ಕಾರಿನಲ್ಲೇ ಬಿಟ್ಟಿರುವುದು ಗಮನಕ್ಕೆ ಬರುತ್ತದೆ.

ಫೆ.11 ರಂದು ರಾತ್ರಿ 8.00 ಗಂಟೆಗೆ ನಂತರ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐಗೆ ಬಂದು ತಿಳಿಸಿದಾಗ ಪಿಎಸ್ಐ ರವರ ಮಾರ್ಗದರ್ಶನದಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಪ್ರವೀಣ್ ಪಾಟೀಲ್ ಸಿ.ಹೆಚ್.ಸಿ, ರವರು ಮತ್ತು ಶಂಕರಲಿಂಗ ಪಿ.ಸಿ. ರವರುಗಳು  ಎಲ್ಲೋ ಬೋರ್ಡ್ ಕಾರಿನ ಮಾಹಿತಿ ಆಧಾರದ ಮೇಲೆ ಮಾಹಿತಿ ಪ್ರಕರಣ ಪತ್ತೆಹಚ್ಚಿದ್ದಾರೆ.

ಮಾಹಿತಿ ತಿಳಿಸಿದ 12:00 ಗಂಟೆಯ ಒಳಗಾಗಿ ಕಳೆದುಕೊಂಡಂತಹ ಕಂಪನಿಯ ವಸ್ತುಗಳು, ಅತಿ ಮುಖ್ಯವಾದ ದಾಖಲೆಗಳನ್ನು ಮತ್ತು 20,000 ಹಣವನ್ನು ಪವನ್ ಅವರಿಗೆ ಹಿಂದುರುಗಿಸಲಾಗಿತ್ತು.

ಇದನ್ನೂ ಓದಿ-https://suddilive.in/archives/8857

Related Articles

Leave a Reply

Your email address will not be published. Required fields are marked *

Back to top button