ರಾಜ್ಯ ಸುದ್ದಿಗಳು

ಪೂಜಾ ಸ್ಥಳಗಳ ಕಾಯಿದೆ ಜಾರಿಗೊಳಿಸುವಂತೆ ಎಸ್ ಡಿ ಪಿ ಐ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

1981 ರ  ಪೂಜಾ ಸ್ಥಳಗಳ ಕಾಯಿದೆಯನ್ನ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಎಸ್ ಡಿ ಪಿಐ ಕರೆ ನೀಡಿದ ಹಿನ್ನಲೆಯಲ್ಲಿ  ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘಟನೆಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದರು.

ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿ ಎಂದು ಬ್ಯಾನರ್ ಹಿಡಿದು ಬಂದ ಎಸ್ ಡಿ ಪಿ ಐ ಸಂಘಟನೆ ಪೂಜಾ ಸ್ಥಳಗಳ ಕಾಯಿದೆಯನ್ನ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಸಂಘಿ ಸರ್ಕಾರದ ವಿರುದ್ಧ, ಬಿಜೆಪಿ ಸರ್ಕಾರದ ವಿರುದ್ಧ ಸಂವಿಧಾನ ವಿರೋಧಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಜ್ಞಾನವ್ಯಾಪಿ ಮಸೀದಿ ನಮ್ಮದು ಎಂದು ಘೋಷಣೆ ಕೂಗಲಾಯಿತು.

ಮಾಧ್ಯಮಗಳಿಗೆ ಮಾತನಾಡಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಖಾನ್, ಸ್ವಾತಂತ್ರ್ಯ ಬಂದ ನಂತರ ಜಾರಿಯಾಗಿರುವ ಪೂಜಾ ಸ್ಥಳಗಳ ಕಾಯಿದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜ್ಞಾನ ವ್ಯಾಪಿ ಮಸೀದಿ ಉತ್ತರ ಪ್ರದೇಶದಲ್ಲಿ ನೂರಾರು ವರ್ಷದಿಂದ ಇದೆ. ಅಲ್ಲಿ ದೇವಸ್ಥಾನವಿದೆಬೆಂದು ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗಿತ್ತು. ನ್ಯಾಯಾಲಯದ ಅನುಮತಿಯಂತೆ ಪರಿಶೀಲನೆ ನಡೆಸಲು ಬಂದ‌ ಅಧಿಕಾರಿ ಪರಿಶೀಲನೆ ನಡೆಸಿ ಮಸೀದಿಯಿಂದ ಹೊರಗೆಬಂದು ಆರ್ ಎಸ್ ಎಸ್ ನ ಜೈ‌ ಶ್ರೀರಾಮ್ ಘೋಷಣೆಯನ್ನ  ಕೂಗಿದ್ದಾರೆ.

ಅಧಿಕಾರಿಯಾಗಿ ಹೀಗೆ ಕೂಗಿರುವುದು ಎಷ್ಟು ಸರಿ? ಅಯೋಧ್ಯೆ ರಾಮಮಂದಿರ ರೀತಿಯಲ್ಲಿಯೇ ಜ್ಞಾನವ್ಯಾಪಿ ಮಸೀದಿಯನ್ನ ಖಬ್ಜ ಮಾಡುವ ಷಡ್ಯಂತರ ನಡೆಯುತ್ತಿದೆ. ಇದನ್ನ ಎಸ್ ಇ ಪಿಐ ಖಂಡಿಸುತ್ತದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ಸಂಘಟನೆಯ ಕಾರ್ಯದರ್ಶಿ ಖಲೀಂ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಯಿದ್ ಇಸಾಕ್ ಫೈರೋಜ್, ರಹೀಂ ಸಾದಿಕ್, ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8765

Related Articles

Leave a Reply

Your email address will not be published. Required fields are marked *

Back to top button