ದುಬೈಗೆ ಹೋದಾಗ ನಡೆದ ಮನೆಕಳುವು ಪ್ರಕರಣ, ಆರೋಪಿ ಬಂಧನ
ಸುದ್ದಿಲೈವ್/ಶಿವಮೊಗ್ಗ
2023 ರ ಜೂನ್ ತಿಂಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನ ದೊಡ್ಡಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಯನ್ನ ಬಂಧಿಸಿದ್ದಾರೆ.
ದಿನಾಂಕ 25-05-2022 ರಂದು ಆರ್.ಎಂ.ಎಲ್ ನಗರದ ವಾಸಿ ಸಲ್ಮಾಖಾನಂ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಗಂಡನ ಬಳಿ ಸೌದಿ ಅರೇಬೀಯಾಕ್ಕೆ ಹೋಗಿದ್ದು, ನಂತರ ವಾಪಾಸ್ ದಿನಾಂಕ: 06-06-2023 ರಂದು ಬಂದು ನೋಡಿದಾಗ ಮನೆಯ ಇಂಟರ್ ಲಾಕ್ ನ್ನ ಮುರಿದು ಮನೆಗಳ್ಳತನ ನಡೆಸಿರುತ್ತಾರೆ.
ಬಂಗಾರದ ಆಭರಣ ಹಾಗು 500 ರಿಯಾಲ್ ಮುಖಬೆಲೆಯ 9 ಸೌದಿ ಅರೇಬಿಯಾದ ನೋಟುಗಳು ಕಳುವು ಆಗಿದ್ದವು. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ದೂರು ದಾಖಲಾಗಿತ್ತು.
ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು ಕಾರಿಯಪ್ಪ ಎ.ಜಿ, ಮಾರ್ಗದರ್ಶದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ ಹಾಗು ಸುರೇಶ್. ಎಂ, ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಪಾಟೀಲ್ ನೇತೃತ್ವದಲ್ಲಿ,ಪಿಎಸ್ಐ ವಸಂತ ಹೆಚ್,ಸಿ, ಶ್ರೀನಿವಾಸ್ ಆರ್,ಶ್ರೀಮತಿ ಮಂಜಮ್ಮ ಹಾಗೂ ಸಿಬ್ಬಂಧಿಗಳಾದ ಹೆಚ್,ಸಿ ಲಚ್ಚಾ ನಾಯ್ಕ, ಪಾಲಾಕ್ಷನಾಯ್ಕ, ಸುರೇಶ್ ಬಿ,ಬಿ, ಸಿಪಿಸಿ ಚಂದ್ರನಾಯ್ಕ, ಪುನೀತ್ ಕುಮಾರ್, ನಿತಿನ್ ಮತ್ತು ಚಂದ್ರನಾಯ್ಕ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ದಿನಾಂಕಃ 02-02-2024 ರಂದು ಪ್ರಕರಣದ ಆರೋಪಿತನಾದ ಸಲೀಂ (44)ನನ್ನು ಬಂಧಿಸಲಾಗಿದೆ. ಕಳುವು ಮಾಡಿ ಮತ್ತೂಟ್ ಫೈನಾನ್ಸ್ ಮತ್ತು ಐ.ಐ.ಎಫ್.ಎಲ್ ಫೈನಾನ್ಸ್ ಗಳಲ್ಲಿ ಗಿರವಿ ಇಟ್ಟಿದ್ದಂತಹ ಅಂದಾಜು ಮೌಲ್ಯ 8,28,400/- ರೂಗಳ ಒಟ್ಟು 155 ಗ್ರಾಂ 35 ಮಿಲಿ ತೂಕದ ಬಂಗಾರದ ಆಭರಣಗಳನ್ನು,
ಅಂದಾಜು ಮೌಲ್ಯ 8,350/- ರೂಗಳ ಒಟ್ಟು 109 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ರೂ 69,000/- ಮೌಲ್ಯದ 500 ರಿಯಾಲ್ ಮುಖ ಬೆಲೆಯ 6 ಸೌದಿ ಅರೇಬಿಯಾದ ನೋಟುಗಳು ಮತ್ತು ಅಂದಾಜು ಮೌಲ್ಯ 21,400/- ರೂಗಳ ವಾಚ್ ಗಳು, ಆರ್ಟಿಫಿಷಿಯಲ್ ಒಡವೆಗಳು, ವ್ಯಾನಿಟಿ ಬ್ಯಾಗ್ ಸೇರಿ ಒಟ್ಟು 10,00,000/- ರೂ ಮೌಲ್ಯವನ್ನ ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಪ್ರಶಂಸಿದ್ದಾರೆ.
ಇದನ್ನೂ ಓದಿ-https://suddilive.in/archives/8622