ಕ್ರೈಂ ನ್ಯೂಸ್

ಜೆಜೆ ತಿರುಮಲೇಶ್ ವರ್ಗಾವಣೆ ರದ್ದು

ಸುದ್ದಿಲೈವ್/ಶಿವಮೊಗ್ಗ

ಬಹಳ ಚರ್ಚೆಗೆ ಗ್ರಾಸವಾಗಿದ್ದ ಜೆಜೆ ತಿರುಮಲೇಶ್ ಅವರ ವರ್ಗಾವಣೆ ರದ್ದಾಗಿದೆ. ಡಿವೈಎಸ್ಪಿ ಬಾಲರಾಜ್ ಅವರ ಸ್ಥಾನಕ್ಕೆ ಬರಬೇಕಿದ್ದ ಜೆಜೆ ತಿರುಮಲೇಶ್ ಅವರನ್ನ ಕರ್ನಾಟಕ ಲೋಕಾಯುಕ್ತದಲ್ಲಿಯೇ ಮುಂದುವರೆಸಿ ಸರ್ಕಾರ ಆದೇಶಿಸಿದೆ.

ಭದ್ರಾವತಿಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುವಾಗ ಜೆಜೆ ತಿರುಮಲೇಶ್ ಅವರನ್ನ ಅಮಾನತ್ತಿನಲ್ಲಿರಿಸಲಾಗಿತ್ತು. ಆ ಕಾರಣವೋ ಅಥವಾ ಇನ್ನ್ಯಾವ ಕಾರಣವೋ ಗೊತ್ತಿಲ್ಲ ಎಚ್ಚೆತ್ತ ಸರ್ಕಾರ ಅವರನ್ನ ಶಿವಮೊಗ್ಗ ಉಪವಿಭಾಗ-1ರ ಡಿವೈಎಸ್ಪಿ ಆಗಿ ಆದೇಶಿಸರುವುದನ್ನ ರದ್ದುಪಡಿಸಿದೆ.

ಅವರ ಸ್ಥಾನಕ್ಕೆ ಬಾಬು ಆಂಜನಪ್ಪರವರನ್ನ ವರ್ಗಾಯಿಸಿದೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಆಂಜನಪ್ಪನವರನ್ನ ಶಿವಮೊಗ್ಗ ಉಪವಿಭಾಗ-1 ರ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಇವರಿಗೆ ನಕ್ಸಲ್ ಪಡೆಯ ವಿರುದ್ಧ ಕಾರ್ಯಾಚರಣೆ ಮಾಡಿರುವ ಅನುಭವವಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅದರಂತೆ ಶಿಕಾರಿಪುರದ ಡಿವೈಎಸ್ಪಿ ಶಿವಾನಂದ ಮದಖಂಡಿಯನ್ನ ದಾಂಡೇಲಿಗೆ ವರ್ಗಾವಣೆ ಮಾಡಲಾಗಿದೆ.

ಅವರ ಸ್ಥಾನಕ್ಕೆ ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆಯಲ್ಲಿದ್ದ ಕೇಶವ ಕೆ.ಇ ಇವರನ್ನ ಶಿಕಾರಿಪುರದ ಡಿವೈಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/8133

Related Articles

Leave a Reply

Your email address will not be published. Required fields are marked *

Back to top button