ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎನ್ ಎಸ್ ಯು ಐ ದೂರು
ಸುದ್ದಿಲೈವ್/ಶಿವಮೊಗ್ಗ
ಸಾಮಾಜಿಕ ಜಾಲತಾಣದಲ್ಲಿ ಎನ್ಎಸ್ಎಲ್ಸಿ ಪರಿಕ್ಷಾ ವೇಳಾಪಟ್ಟಿಯ ವಿಷಯವಾಗಿ ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಎನ್ ಎಸ್ ಯು ಐ ಜಿಲ್ಲಾಘಟಕ ಜಯನಗರ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದೆ.
ಕರ್ನಾಟಕ ಸರ್ಕಾರವು ಈ ಬಾರಿಯ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸದರಿ ಪಟ್ಟಿಯಲ್ಲಿ ದಿನಾಂಕ 01.03.2024ರ ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5.15 ಗಂಟೆಯ ವರೆಗೆ ನಿಗದಿ ಮಾಡಿರುತ್ತಾರೆ.
ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯು ಆರಂಭವಾಗುತ್ತಿದ್ದು ಬೆಳಗಿನ ಸಮಯದಲ್ಲಿ ಸದರಿ ಪರೀಕ್ಷೆಯು ಇರುವ ಕಾರಣ ಈ ರೀತಿ ಸಮಯವನ್ನು ಬದಲಿಸಲಾಗಿದೆ. ಉಳಿದ ಎಲ್ಲಾ ಪರೀಕ್ಷೆಗಳು ಸಹ ಬೆಳಗಿನ ಸಮಯಕ್ಕೆ ನಿಗದಿಪಡಿಸಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ ಎಂಬುವವರು ಸದರಿ ಪರೀಕ್ಷಾ ವೇಳಾಪಟ್ಟಿಯಲ್ಲಿ ದಿನಾಂಕ 1.03.2024ರ ಶುಕ್ರವಾರ ಪರೀಕ್ಷಾ ದಿನಕ್ಕೆ ನೋಡಿದ ತಕ್ಷಣ ಎದ್ದು ಕಾಣುವಂತೆ ಮಾಡಿ “KARNATAKA STATE 10 STANDARD EXAM TIME TABLE RELEASED. ALL THE EXAM IN THE MORNING SESSION BUT FOR FRIDAY, WHY ?, OH.. TIME FOR NAMAZ ?’ ಈ ರೀತಿ ಅನ್ಯ ಧರ್ಮವನ್ನು ಹಿಯಾಳಿಸಿ ಬರೆಯಲಗಿದೆ.
ಸಾರ್ವಜನಿಕವಾಗಿ ಫೇಸ್ಬುಕ್ನಲ್ಲಿ ಹಾಕಿರುವ ಚಕ್ರವರ್ತಿ ಸೂಲಿಬೆಲೆಯವರು ಅನ್ಯ ಧರ್ಮದವರಿಗೆ ನೋವಾಗಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮುಸಲ್ಮಾನರ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರಲಿ ಎಂದು ಹಾಗೂ ಈ ಮೂಲಕ ಸರ್ಕಾರವು ಸಹ ಒಂದು ಧರ್ಮದ ವರವಿದೆ ಎಂಬ ಭಾವನೆ ಬರುವಂತೆ ಮಾಡಿ ಸಮಾಜದ ಅಶಾಂತಿಗೆ ಕಾರಣಿಭೂತರಾಗಿರುತ್ತಾರೆ.
ಇದರಿಂದ ಸಮಾಜದಲ್ಲಿ ಅಶಾಂತಿವುಂಟಾಗಿ ಕೋಮುಗಲಭೆ ಆಗುವ ಸಾಧ್ಯತೆಗಳಿರುವುದರಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭೇದ-ಭಾವ ಉಂಟಾಗುವುದರಿಂದ ತಕ್ಷಣವೇ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಎನ್ ಎಸ್ ಯು ಐ ಆಗ್ರಹಿಸಿದೆ.
ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ವಿಜಯ್, ರವಿ ಕುಮಾರ್, ಗಿರೀಶ್, ಶಿವು ರವಿ, ಚಂದ್ರೋಜಿ, ಮನು ರಜತ್, ಅಭಿ, ಜಿ.ಡಿ. ಮಂಜುನಾಥ್ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/8614