ಕ್ರೈಂ ನ್ಯೂಸ್

Ksrtc ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳವು ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಳುವು ಪ್ರಕರಣ ದಾಖಲಾಗಿದೆ. ಇದು ವರ್ಷದ ಎರಡನೇ ಕಳುವು ಪ್ರಕರಣವಾಗಿದೆ.

ತರಿಕೆರೆಯ ನಿವಾಸಿ ಜಯಮ್ಮ ಎಂಬುವರು ತಮ್ಮ ಸಂಬಂಧಿಕರಾದ ಚನ್ನಪ್ಪರವರಿಗೆ ರಸ್ತೆ ಅಪಘಾತವಾಗಿದ್ದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು ಅವರನ್ನ‌ ನೋಡಲು ಬಂದಿದ್ದರು.

ಸಂಬಂಧಿಕರಾದ ಬಸಮ್ಮ ರವರೊಂದಿಗೆ ಮದ್ಯಾಹ್ನ 02-30 ಗಂಟೆಗೆ ಬಂದು ಚನ್ನಪ್ಪ ರವರನ್ನು ನೋಡಿಕೊಂಡು ವಾಪಾಸ್ ತರೀಕೆರೆಗೆ ಹೋಗಲು ಸಂಜೆ 06-15 ಗಂಟೆ ಸುಮಾರಿಗೆ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದು ಬಸ್ ಹತ್ತಿಕೊಂಡು ಶಿವಮೊಗ್ಗ ಭದ್ರಾವತಿ ದಾರಿ ಮಧ್ಯದಲ್ಲಿ ಹೋಗುತ್ತಿದ್ದಾಗ ಜಯಮ್ಮ ತನ್ನ ಕೊರಳಿನಲ್ಲಿದ್ದ ಸುಮಾರು 200000/-ರೂ ಬೆಲೆಬಾಳುವ ಎರಡು ಎಳೆಯ ಬಟಾಣಿ ಮಾದರಿಯ ಬಂಗಾರದ ಸರ ಕಳುವಾಗಿರುವುದು ಗಮನಕ್ಕೆ ಬಂದಿದೆ.‌

ಎಲ್ಲಕಡೆ ಹುಡುಕಿದರೂ ಸರ ಕಂಡು ಬಂದಿಲ್ಲ. ಮಗಳಿಗೆ ತಿಳಿಸಿ ಕೊನೆಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಈ ವರ್ಷದ ಎರಡನೇ ಪ್ರಕರಣವಾಗಿದೆ.

8 ಸಿಸಿ ಟಿವಿ ಕ್ಯಾಮೆರಾ

ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲವೆಂದು ಕಳೆದ ಬಾರಿ ಸುದ್ದಿಲೈವ್ ಅಭಿಯಾನ ನಡೆಸಿತ್ತು. ಅದರ ಫಲಶೃತಿ ಅಂತೆ ಬಸ್ ನಿಲ್ದಾಣದಲ್ಲಿ 8 ಕ್ಯಾಮೆರಾಗಳು ಅಳವಡಿಸಲಾಗಿದೆ. ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ್ದ ಬಡಾಣಿ ಮಾದರಿಯ ಚಿನ್ನದ ಸರ ಬಸ್ ನಿಲ್ದಾಣದಲ್ಲಿ ಹತ್ತುವಾಗ ಇದ್ದಿದ್ದು ಮಾರ್ಗ ಮಧ್ಯೆಯಲ್ಲಿ ಕಳುವಾಗಿರುವುದು ಸಿಸಿ ಟಿವಿಯಿಂದ ತಿಳಿದು ಬಂದಿದೆ. ಇದರಿಂದ ಪೊಲೀಸರಿಗೆ ಹುಡುಕಲು ಅನುಕೂಲವಾಗಿದೆ. ಖದೀಮರ ಸೆರೆಗೆ ಪೊಲೀಸರು ಬಲವಾದ ಬಲೆ ಬೀಸಿದ್ದಾರೆ.

ಇದನ್ನೂ ಓದಿ-https://suddilive.in/archives/8490

Related Articles

Leave a Reply

Your email address will not be published. Required fields are marked *

Back to top button