ಕ್ರೈಂ ನ್ಯೂಸ್

ಭದ್ರಾವತಿ-ಇಬ್ಬರ ಮೇಲೂ ಹಲ್ಲೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ನಡೆಯುತ್ತಿರುವ ಪ್ರಕರಣಗಳು ವೈಯುಕ್ತಿಕ ಮಟ್ಟಕ್ಕೆ ತಿರುಗಿದಂತೆ ಕಂಡು ಬರುತ್ತಿದೆ. . ನಿನ್ನೆ ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನಿಗೆ ಹಲ್ಲೆ ನಡೆದ ಪ್ರಕರಣದ ಬೆನ್ನಲ್ಲೇ ಗೋಕುಲ್ ಕೃಷ್ಣ ಎಸ್. ಕುಮಾರ್ ಮೇಲೂ ಹಲ್ಲೆಯಾದಂತೆ ಕಙಡು ಬರುತ್ತಿದೆ.

ಭದ್ರಾವತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಓಸಿ ಮಟ್ಕಾ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಶಾಸಕರ ಹೆಸರು ನಮೋದಿಸಿ ಚುನಾವಣೆ ಸಮಯದಲ್ಲಿ ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ರಿ ಈಗ ಕಾನೂನು ಬಾಹಿರ ಚಟುವಟಿಕೆಗೆ ಹೆಚ್ಚು ಒತ್ತು ಕೊಡುತ್ತಿದ್ದೀರ ಯುವಕರಿಗೆ ಕೈತುಂಬ ಕೆಲಸ ಕೊಡುವುದಾಗಿ ಹೇಳಿದ್ರಿ ಎಂದು ಫೇಸ್ ಬುಕ್ ನಲ್ಲಿ ಗೋಕುಲ್ ಕೃಷ್ಣನ್ ಪೋಸ್ಟ್ ಮಾಡಿದ್ದರು.

ಈ ಪೋಸ್ಟರ್ ಗೆ ಮನೆಯ ಮುಂದೆ ನಿಂತ ಕಾರನ್ನ ಜಖಂಗೊಳಿಸಲಾಗಿತ್ತು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ನಡೆದ ವೇಳೆ  ಗೋಕುಲ್ ಕೃಷ್ಣನ್ ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನ ಕೆಂಚೆನಳ್ಳಿ ಕುಮಾರ್ ವಿರುದ್ಧ ಪೋಸ್ಟ್ ಗಳನ್ನ ಹಾಕಿರುವುದಾಗಿ ಈಗ ಬೆಳಕಿಗೆ ಬರುತ್ತಿದೆ.

ಕುಲ್ಡಾ ಐ ಅಮ್ ಕಮಿಂಗ್ ಡಿಯರ್ ಕೆಂಚು ಎಂಬ ಪೋಸ್ಟು, ಹಾಗೂ ಹಲವು ಫೇಸ್ ಬುಕ್ ನಲ್ಲಿ ಹರಿಬಿಟ್ಟಿರುವ ಪೋಸ್ಟರ್ ಗಳು ಲಭ್ಯವಾಗಿವೆ. ಅಲ್ಲದೆ ಕೆಂಚನಳ್ಳಿ ಕುಮಾರ್ ಗೆ ಕರೆ ಮಾಡಿ ಖಾಸಗಿ ಹೋಟೆಲ್ ಬಳಿ ಕಾಯುತ್ತಿರುವುದಾಗಿ ತಿಳಿದು ಬಂದರೆ, ಈ ಬಗ್ಗೆ ಸಹ ವಿಡಿಯೋ ಸಹ ಹರಿದಾಡುತ್ತಿದೆ.ಖಾಸಗಿ ಹೋಟೆಲ್ ಬಳಿ ಗೋಕುಲ್ ರ ಮೇಲೆ ಹಲ್ಲೆ ಮಾಡಲಾಗಿದೆ.  ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಿಂದ ಶಿವಮೊಗ್ಗ ಮೆಗ್ಗಾನ್ ಗೆ ರವಾನಿಸಲಾಗಿದೆ.

ಈ ನಡುವೆ ಪೊಲೀಸರು ಗೋಕುಲ್ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳನ್ನ ಜಖಂಗೊಳಿಸಿದವರನ್ನ ಬಂಧಿಸಿದ್ದಾರೆ. ಗಣೇಶ್ (22) ಹರ್ಷ(22) ಹಾಗೂ ನಂಜೇಗೌಡರನ್ನ ಬಂಧಿಸಲಾಗಿದೆ.

ಇದನ್ನೂ ಓದಿ-https://suddilive.in/archives/4665

Related Articles

Leave a Reply

Your email address will not be published. Required fields are marked *

Back to top button