ಕ್ರೈಂ ನ್ಯೂಸ್

ಮೆಂಟರ್ ಸೂರಿಯ ಕೊಲೆ ಪ್ರಕರಣ-ಮೂವರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಸುರೇಶ್ ಅಲಿಯಾಸ್ ಮೆಂಲ್ ಸೂರಿ ಯಾನೆ ಕಳ್ಳ ಸೂರಿಯನ್ನ ಮೊನ್ನೆ ಬಾಪೂಜಿ ನಗರದ 8 ನೇ ತಿರುವಿನಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.

ಕೊಲೆ ಆರೋಪಿಗಳಲ್ಲಿ ಸೂರಿಯ ಸಂಬಂಧಿಕರೆ ಇದ್ದಾರೆ. ಇವರನ್ನ ಪೊಲೀಸರು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ ಬಾಪೂಜಿ ನಗರದ 8 ನೇ ತಿರುವಿನಲ್ಲಿರುವ ರೊಟ್ಟಿ ಕಾರ್ನರ್ ಬಳಿ ನಿಂತಿದ್ದ ಸೂರಿಯನ್ನ ಮೂವರು ಆರೋಪಿಗಳು ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್ ಗಳಿಂದ ಹೊಡೆದು ಸಾಯಿಸಿದ್ದಾರೆ.

ಸುರೇಶನು ಈಗ್ಗೆ 3-4 ವರ್ಷಗಳಿಂದ ಸಂಸಾರದಲ್ಲಿನ ಕೌಟುಂಬಿಕ ಕಲಹದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟಿದ್ದನು, ಕಳ್ಳತನ ಕೇಸಿನಲ್ಲಿ ಜೈಲಿಗೆ ಹೋದ ಸೂರಿ ಈಗ್ಗೆ ಸುಮಾರು 20-25 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ತನ್ನ ದೊಡ್ಡಮ್ಮನ ಮನೆಯಾದ ಬಾಪೂಜಿನಗರ 7ನೇ ಕ್ರಾಸಿನಲ್ಲಿ ವಾಸವಾಗಿದ್ದನು,

ಸುಮಾರು 8-10 ದಿನಗಳಿಂದ ಅವನ ದೊಡ್ಡಮ್ಮನ ಮನೆಯಲ್ಲಿ ಏನೋ ಕಿರಿಕಿರಿ ಮಾಡಿಕೊಂಡ ಸೂರಿ ಆ ಮನೆಯನ್ನು ಬಿಟ್ಟು ಅವರ ದೊಡ್ಡಮ್ಮನ ಮಗಳ ರವರ ಮನೆಯಲ್ಲಿ ವಾಸವಾಗಿದ್ದನು. ಶನಿವಾರ ಸಂಜೆ ಸುಮಾರು 7:45 ರಿಂದ 8:00 ಗಂಟೆ ಮಧ್ಯಾವಧಿಯಲ್ಲಿ ಸುರೇಶ ನ ಸಂಬಂಧಿಕರಾದ ಮೂವರು ಸೇರಿ ಕ್ರಿಕೆಟ್ ಬ್ಯಾಟ್ ಹಾಗೂ ಕ್ರಿಕೆಟ್ ಸ್ಟಂಪ್ ಗಳಿಂದ ಸುರೇಶನ ತಲೆಗೆ ಹಾಗೂ ಕಾಲಿಗೆ ಹೊಡೆದು ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯ ದ್ವೇಷದಿಂದ ಸುರೇಶ @ ಮೆಂಟಲ್ ಸೂರಿಯ ಸಂಬಂಧಿಕರು ಇತರರ ಪ್ರೇರಣೆಯಿಂದ  ಕೊಲ್ಲಲೇಬೇಕೆಂಬ ಪೂರ್ವ ತಯಾರಿಯೊಂದಿಗೆ ಬಂದು  ಸಾರ್ವಜನಿಕವಾಗಿ ಎಲ್ಲರ ಎದುರಲ್ಲಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/13367

Related Articles

Leave a Reply

Your email address will not be published. Required fields are marked *

Back to top button