ಕ್ರೈಂ ನ್ಯೂಸ್

ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಯ ಜಿಲ್ಲಾಧ್ಯಕ್ಷರಿಂದ ಮನವಿ

ಸುದ್ದಿಲೈವ್/ಶಿವಮೊಗ್ಗ

ಡಿವೈಎಸ್ಪಿ ಸುರೇಶ್ ವಿರುದ್ಧ ಜೈಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್ ಸಿ ಎಸ್ ಟಿ ಅಸಂಘಟಿತ ಕಾರ್ಮಿಕ ಅಭಿವೃದ್ಧಿ ಸಂಘ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಪಿಎಸ್ ಐಗೆ ವಸಂತ್ ಗೆ ಮನವಿ ಸಲ್ಲಿಸಿದ್ದಾರೆ.

ದಲಿತರಾದ ಹಾಗೂ ರಾಗಿಗುಡ್ಡದ ನಿವಾಸಿ ನಾರಾಯಣ ಸ್ವಾಮಿ‌ ಅವರ ಮನೆಗೆ ನುಗ್ಗಿ ಅವರ ಪತ್ನಿ‌ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಸುಮೋಟೊ ಪ್ರಕರಣ ದಾಖಲಿಸಿರುವ ಸುರೇಶ್ ಅವರು ಉದ್ದೇಶ ಪೂರಕವಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಪ್ರಕರಣ ದಾಖಲಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್ ಅರುಣ್ ಕುಮಾರ್ ಪಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರಕರಣದ ಬಗ್ಗೆ ವಿಚಾರಣೆ ಮಾಡುವ ನೆಪದಲ್ಲಿ ಡಿವೈಎಸ್ಪಿ ಸುರೇಶ್ ನಾರಾಯಣ ಸ್ವಾಮಿ ಅವರ ಪತ್ನಿ ಮತ್ತು ಮಕ್ಕಳಿಗೆ ಇಲ್ಲಲ್ಲದ ಪ್ರಶ್ನೆ ಕೇಳಿದ್ದಾರೆ. ಇದನ್ನ ನಾವು ಅನ್ಯಾಯವಾಗಿರೋದು ನಮಗೆ ನೋಡುದರೆ ಕೌಂಟರ್ ಕೇಸ್ ಆಗುತ್ತದೆ ಎಂದು ಹೇಳುತ್ತೀರಿ. ಮೊದಲು ದೂರು ದಾಖಲಿಸಿಕೊಳ್ಳಿ ಎಙದು ಹೇಳಿದ್ದಕ್ಜೆ ನನ್ನ ಮೇಲೆ ದರ್ಫ ತೋರಿ ‘ಏ ಈಡಿಯಟ್ ಲೋಫರ್’ ಎಂಬ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಎಸ್ಪಿ ಸಾಹೇಬರು ಠಾಣೆಗೆ ಬರಬೇಕು ಎಂದು ಪ್ರತಿಭಟನೆ ಮಾಡಲು‌ಮುಂದಾಗಿದ್ದಕ್ಕೆ ನನ್ನ ವಿರುದ್ಧಕರ್ತ್ಯಕ್ಕೆ ಅಡ್ಡಿ ಎಂಬ ದೂರು ದಾಖಲಿಸಿದ್ದಾರೆ. ಹಾಗಾಗಿ ನೊಂದ ದಲಿತರ ಪರ ನ್ಯಾಯ ಕೊಡಿಸಿ ಡಿವೈಎಸ್ಪಿ ವಿರಯದ್ಧ ಕಾನೂನು‌ ಕ್ರಮ ಕೈಗೊಳ್ಳುವಂತೆ ಅರುಣ್ ಕುಮಾರ್ ಮನವಿಯಲ್ಲಿ ಆಗ್ರಹಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/8812

Related Articles

Leave a Reply

Your email address will not be published. Required fields are marked *

Back to top button