ಕ್ರೈಂ ನ್ಯೂಸ್

ಮರ ಕಡಿದ ಯುವಕನಿಗೆ ಥಳಿತ-ಹಲ್ಲೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

ಸುದ್ದಿಲೈವ್/ಹೊಳೆಹೊನ್ನೂರು

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಖಬರ್ ಸ್ಥಾನದಲ್ಲಿದ್ದ ಮರವನ್ನ ಕಡಿದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿದೆ. ಕ್ಷಮೆ ಕೇಳಿದರೂ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಹಲ್ಲೆ ನಡೆಸಿದವರನ್ನ ಬಂಧಿಸುವಂತೆ ಗ್ರಾಮಸ್ಥರು ಠಾಣೆ ಮುಂದೆ ಜಮಾಯಿಸಿದ್ದಾರೆ.

ಭದ್ರಾವತಿ ತಾಲೂಕಿನ ಜಂಬಗಟ್ಟಿ ಗ್ರಾಮದಲ್ಲಿರುವ ಖಬರ್ ಸ್ಥಾನದಲ್ಲಿದ್ದ ಮರವನ್ನ ಕಡಿದ ಯುವಕನಿಗೆ ಅನ್ಯಕೋಮಿನ ಯುವಕರಿಂದ ಹಲ್ಲ ನಡೆದಿದೆ. ರವಿ ಮರ ಕಡಿದಿದ್ದು ಹಾಗೂ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಹಲ್ಲೆ ಖಂಡಿಸಿ ಠಾಣೆ ಎದುರು ಗ್ರಾಮಸ್ಥರು ಜಮಾಯಿಸಿದ್ದಾರೆ.

ಮರ ಕಡಿದಿದ್ದಕ್ಕೆ ಕ್ಷಮೆ ಕೇಳಿದ್ದೇವೆ, ಆದರೂ ಹಲ್ಲೆ ಮಾಡಿರುವುದಾಗಿ ರವಿ ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರ ಬಂಧನಕ್ಕೆ ಆಗ್ರಹಿಸಲಾಗಿದೆ. ಪೊಲೀಸರು ಬಂಧಿಸುವ ಭರವಸೆ ನೀಡಿದರೂ ಗ್ರಾನಸ್ಥರು ಒಪ್ಪುತ್ತಿಲ್ಲ.

ಇದನ್ನೂ ಓದಿ-https://suddilive.in/archives/8424

Related Articles

Leave a Reply

Your email address will not be published. Required fields are marked *

Back to top button