ರಾಜಕೀಯ ಸುದ್ದಿಗಳು

ಶೆಟ್ಟರ್ ಘರ್ ವಾಪ್ಸಿಯಿಂದ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರದು-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ದೆಹಲಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಪಾಸ್ ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಗೆ ಅವರ ವಾಪಾಸ್ ಆಗುವ ಬಗ್ಗೆ ಗುಲ್ಲೆಬ್ಬಿದೆ. ಹಲವು ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ವಿಧಾನ ಸಭಾ ಚುನಾವಣೆಯಲ್ಲಿ 75 ವರ್ಷ ಮುಗಿದಿರುವರಿಗೆ ಬಿಜೆಪಿ ಟಿಕೇಟ್ ನೀಡೊಲ್ಲ ಎಂಬ ಅಲಿಖಿತ‌ ಕಾನೂನು ಹಿನ್ನಲೆಯಲ್ಲಿ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು.

ಆದರೆ ಬಿಜೆಪಿಯ ಟೆಂಗಿನಕಾಯಿ ಅವರ ಎದುರು ಶೆಟ್ಟರ್ ಸೋತಿದ್ದರು. ಶೆಟ್ಟರ್ ಸೋತರೂ ಸಹ ಕಾಂಗ್ರೆಸ್ ಅವರನ್ನ ಎಂಎಲ್ ಸಿಯಾಗಿ ಆಯ್ಕೆ ಮಾಡಿತ್ತು. ಕಾಂಗ್ರೆಸ್ ಸೇರಿಕೊಂಡು 8-10 ತಿಂಗಳ ಅಂತರದಲ್ಲಿ ಶೆಟ್ಟರ್ ಘರ್ ವಾಪಸಿ ಆಗಿದ್ದಾರೆ. ಅವರ ಘರ್ ವಾಪ್ಸಿಯಿಂದಾಗಿ ಹಲವು ಚರ್ಚೆಯನ್ನ ಜೀವಂತವಾಗಿರಿಸಲಾಗಿದೆ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಾಸ್ ಹೋಗಲ್ಲ ಎಂದು ಹೇಳಿದ್ದರು. ಆದ್ರೆ 24 ಘಂಟೆಯಲ್ಲಿ ಬದಲಾವಣೆ ಆಗಿದೆ ನನಗೆ ಗೊತ್ತಿಲ್ಲ. ಸಾಕಷ್ಟು ಒತ್ತಡ ಅವರ ಮೇಲೆ ಇದೆ ಅನಿಸುತ್ತೆ.ಅದನ್ನು ಶೆಟ್ಟರ್ ಅವರೇ ಹೇಳಬೇಕು ಎಂದು ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ. ಬಿಜೆಪಿ ಪಕ್ಷಕ್ಕೆ ಗೌರವ, ಮಾನ ಮರ್ಯಾದೆ ಇದ್ದರೆ. ನಿಮ್ಮ ಸಾಧನೆ ಹೇಳಿ. ಜಾತಿ ಆಧಾರದ ಮೇಲೆ ಬಿಜೆಪಿ ಚುನಾವಣೆಯನ್ನ ಯಾವಾಗಲೂ ಮಾಡಿಕೊಂಡು ಬಂದಿದೆ. ಶೆಟ್ಟರ್ ಬಿಜೆಪಿಗೆ ವಾಪಸ್ಸು ಹೋಗಿದ್ದು ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ-https://suddilive.in/archives/7706

Related Articles

Leave a Reply

Your email address will not be published. Required fields are marked *

Back to top button