ರಾಜಕೀಯ ಸುದ್ದಿಗಳು

ಹರಿಪ್ರಸಾದ್ ಗೆ ಶಾಸಕ ಚೆನ್ನಬಸಪ್ಪರ ಸವಾಲೇನು?

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕದಲ್ಲೂ ಗೋದ್ರಾ ಮಾದರಿ ಅವಘಡ ಸಂಭವಿಸುವ ಅನುಮಾನ ವ್ಯಕ್ತಪಡಿಸಿರುವ ಮಾಜಿ ಎಂಎಲ್ ಸಿ ಹಾಗೂ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ ಹೇಳಿಕೆಗೆ ಶಾಸಕ ಚೆನ್ನಬಸಪ್ಪ ತಾಕತ್ತಿದ್ದರೆ ಗೋದ್ರಾ ಆಗುವುದನ್ನ ಮಾಡಿ ಎಂದು ಗುಟರ್ ಹಾಕಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿದ ಶಾಸಕರು, ಹರಿ ಪ್ರಸಾದ್ ಅವರ ಮನಸ್ಸಿನಲ್ಲಿ ಏನಿದೆ ಹೇಳಿ ನೋಡೋಣ. ಕರ್ನಾಟಕವನ್ನ ತಾಕ್ಕತ್ತಿದ್ದರೆ ಮಾಡು ಮಗನೆ ಎಂಬ ಮಾತು ಹೇಳ‌ಬೇಕಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರು ತನ್ನ ಹೆರಿನಲ್ಲೇ ರಾಮ ಇದ್ದಾನೆ ಅಂತಾರೆ. ಹರಿಪ್ರಸಾದ್ ಹೆಸರಿನಲ್ಲೂ ಹರಿ ಇದ್ದಾನಲ್ಲ. ಹರಿಪ್ರಸಾದ್ ಕರ್ನಾಟಕದಲ್ಲಿ ಗೋದ್ರ‌ನರಮೇಧ ನಡೆಯುವ ಮುನ್ಸೂಚನೆ ಇದ್ದರೆ ಎಲ್ಲಿ ಹೇಳಬೇಕು. ಅವರದ್ದೇ ಸರ್ಕಾರ ಇದೆ. ಅಲ್ಲಿ ಕರೆದು ಈ ರೀತಿ ಷಡ್ಯಂತ್ರ್ಯ ನಡೆಯಲಿದೆ ಎಂದು ತಿಳಿಸಬೇಕಿತ್ತು.

ಹಾಗಾದರೆ ಹರಿಪ್ರಸಾದ್ ಅವರ ಮನಸ್ಸಿನಲ್ಲಿ ಏನಿದೆ? ಹಾಗಾದರೆ ತಕ್ಕತ್ತಿದ್ದರೆ ನಡೆಸು ಮಗನೆ ಎಂದು ಸವಾಲು ಎಸೆದರು. ಬಿಜೆಪಿ ಇರೋದೆ ಹಿಂದೂ ರಕ್ಷಣೆಗೆ ಅದನ್ನ ಮಾಡಿಯೇ ತೀರುತ್ತೇವೆ ಎಂದರು.

ಇದನ್ನೂ ಓದಿ-https://suddilive.in/archives/6137

Related Articles

Leave a Reply

Your email address will not be published. Required fields are marked *

Back to top button