ಕ್ರೈಂ ನ್ಯೂಸ್

ಬೊಮ್ಮನ್ ಕಟ್ಟೆಯ ಹರೀಶ್ ಮತ್ತು ಗಂಟೆಕಳ್ಳ…

ಸುದ್ದಿಲೈವ್/ಶಿವಮೊಗ್ಗ

ದೇವಸ್ಥಾನದ ಗಂಟೆ ಕದ್ದಿದ್ದಾನೆ ಎಂದು ವ್ಯಕ್ತಿಯೋರ್ವ‌ನನ್ನ ಸ್ಥಳೀಯರು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿರುವ ಘಟನೆ ನಗರದ ಹಳೇ ವಿನಾಯಕ ಚಲನಚಿತ್ರ ಮಂದಿರದ ಬಳಿ ನಡೆದಿದೆ.

ಬೊಮ್ಮನ್ ಕಟ್ಟೆಯ ಹರೀಶ್ ಎಂಬಾತ ಕಳೆದ 20 ದಿನಗಳಿಂದ ಮನೆಬಿಟ್ಟು ತಿರುಗುತ್ತಿದ್ದನು. ಇಂದು ದೇವಸ್ಥಾನದ ಗಂಟೆಯೊಂದಿಗೆ ಪ್ರತ್ಯಕ್ಷನಾಗಿದ್ದಾನೆ. ಗಂಟೆ ಪತ್ತೆಯಾದ ಹಿನ್ನಲೆಯಲ್ಲಿ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಗಂಟೆ ಪತ್ತೆಯಾದ ಕಾರಣಕ್ಕೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕುಡಿದು ತೂರಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಹರೀಶ್ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.

260 ರೂ. ಮೌಲ್ಯದ ಗಂಟೆ

ಆತನ ಬಳಿ ದೇವಸ್ಥಾನದ ಗಂಟೆ ಪತ್ತೆಯಾದ ಹಿನ್ನಲೆಯಲ್ಲಿ ಆತನನ್ನ ವಿಚಾರಿಸಲು ಮುಂದಾದ ಪೊಲೀಸರಿಗೆ ಕ್ಷಣಕ್ಕೊಂದು ಮಾಹಿತಿ ನೀಡುತ್ತಿದ್ದಾನೆ. ಗಾಂಧಿ ಬಜಾರ್ ನ ದೇವಸ್ಥಾನದಲ್ಲಿ ಗಂಟೆ ಕದ್ದಿದ್ದೇನೆ ಎಂದಿದ್ದಾನೆ.ಆದರೆ ಗಾಂಧಿ ಬಜಾರ್ ನ ಯಾವುದೇ ದೇವಸ್ಥಾನಗಳಲ್ಲಿ ಗಂಟೆ ಕಳುವಿನ ಬಗ್ಗೆ ದೂರು ದಾಖಲಾಗಿಲ್ಲ. ಮತ್ತಿನ ಅಮಲಿನಲ್ಲಿ ಈ ಹೇಳಿಕೆಗಳು ಹೊರಬರುತ್ತಿದೆ. ಆತನ ಬಳಿಯಿರುವ ಗಂಟೆಯ ಮಾರುಕಟ್ಟೆ ಮೌಲ್ಯ 260 ರೂ. ಎಂದು ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/7667

Related Articles

Leave a Reply

Your email address will not be published. Required fields are marked *

Back to top button