ಕ್ರೈಂ ನ್ಯೂಸ್

ವೀರಣ್ಣ ಬೆನವಳ್ಳಿಯ ಸಹೋದರಿಯರು ಬಜಾರ್ ನಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದು ಹೇಗೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿರುವ ಕಬ್ಬಿನ ಅಂಗಡಿಯಲ್ಲಿ ಕಬ್ಬಿನ ಹಾಲು ಕುಡಿಯುವಾಗ ಮಹಿಳೆಯ ಪರ್ಸ್ ನಲ್ಲಿದ್ದ ಚಿನ್ನಾಭರಣವನ್ನ ಕದ್ದಿರುವ ಘಟನೆ ನಡೆದಿದೆ.

ಬಜಾರ್ ನ ಮುಖ್ಯರಸ್ತೆಯಲ್ಲಿರುವ ಚಿನ್ನಾಭರಣದ ಅಂಗಡಿಗೆ ಬಂದಿದ್ದ‌ ವೀರಣ್ಣಬೆನವಳ್ಳಿ ಗ್ರಾಮದ ಸವಿತಾ ಎಂಬ ಮಹಿಳೆ ತನ್ನ ಸಹೋದರಿಯ ಜೊತೆ ಬಂದು 6.780 ಗ್ರಾಂನ ಹ್ಯಾಂಗಿಂಗ್ಸ್ ಮತ್ತು ಕಿವಿ ಮಾಟಿಯನ್ನ ಖರೀದಿಸಿದ್ದರು.

ನಂತರ ಅಲ್ಲೇ ಇದ್ದ ಕಬ್ಬಿನ ಅಂಗಡಿಗೆ ತೆರಳಿದ ಸೋದರಿ ಕಬ್ಬಿನ ಹಾಲು ಕುಡಿಯುವಾಗ ಪರ್ಸ್ ನ ಜಿಪ್ ಒಪನ್ ಆಗಿತ್ತು. ಕಬ್ಬಿನ ಹಾಲಿನ ಹಣ ಕೊಡುವ ವೇಳೆ ಮಹಿಳೆಯ ಗಮನಕ್ಕೆ ಬಂದಿದೆ. ಖದೀಮ ಈ ವೇಳೆ ಕೈಚಳಕ ತೋರಿದ್ದಾನೆ.

ಆಗ ತಾನೇ ಚಿನ್ನಾಭರಣದ ಅಂಗಡಿಗೆ ತೆರಳಿ ಇನ್ನೇನು ಮನೆಗೆ ಹೋಗಬೇಕು ಅಷ್ಟರಲ್ಲಿ ಬಿಸಿಲಿನ‌ ಬೇಗೆ ಈಡೇರಿಸಿಕೊಳ್ಳಲು ಕಬ್ಬಿನ ಹಾಲಿನ ಅಂಗಡಿಗೆ ಹೋದ ಪರಿಣಾಮ ಚಿನ್ನಭರಣವನ್ನ‌ ಕಳೆದುಕೊಳ್ಳುವಂತಾಗಿದೆ. 37500 ರೂ. ಮೌಲ್ಯದ ಚಿನ್ನಾಭರಣದ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ-https://suddilive.in/archives/8805

Related Articles

Leave a Reply

Your email address will not be published. Required fields are marked *

Back to top button