ಸ್ಥಳೀಯ ಸುದ್ದಿಗಳು

ಪಾರಿವಾಳ ಹಾರಿಸಿ ಸೌಹಾರ್ಧ ರಿಪಬ್ಲಿಕ್‌ಕಪ್-2024 ಕ್ಕೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಜಿಲ್ಲಾಡಳಿತ ವತಿಯಿಂದ‌ ಸೌಹಾರ್ಧ ರಿಪಬ್ಲಿಕ್ ಕಪ್ -2024 ಕ್ರಿಕ್ರೆಟ್ ಪಂದ್ಯಾವಳಿಯನ್ನ ಹಮ್ಮಿಕೊಳ್ಳಲಾಯಿತು. ತಲಾ‌ ಐದು ಓವರ್ ಗಳ ಕ್ರಿಕೆಟ್ ಮ್ಯಾಚ್ ಇದಾಗಿದೆ.

ರಾಗಿಗುಡ್ಡದಲ್ಲಿ ಈದ್ ಹಬ್ಬದ ಮೆರವಣಿಗೆಯಲ್ಲಿ ನಡೆದ ಗಲಭೆಯಿಂದಾಗಿ ಪ್ರಕ್ಷುಬ್ಧಗೊಂಡಿದ್ದ ರಾಗಿಗುಡ್ಡದಲ್ಲಿ ಸೌಹಾರ್ಧತೆ ನೆಲೆಸಲೆಂದು ಇಂದು ಸೌಹಾರ್ಧಯುತ ರಿಪಬ್ಲಿಕ್ ಕಪ್-2024 ನ್ನ ಆಡಿಸಲಾಗುತ್ತಿದೆ.‌ ಎರಡು ದಿನ ನಡೆಯುವ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಬಹುಮಾನ ಸಹ ನೀಡಲಾಗುತ್ತಿದೆ.

ಸೌಹಾರ್ಧ ರಿಪಬ್ಲಿಕ್ ಕಪ್ ನ್ನ ಎಸ್ಪಿ ಮಿಥುನ್ ಕುಮಾರ್ ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗಳು ರಾಗಿಗುಡ್ಡದ ಮೈದಾನದಲ್ಲಿ ಆಡಿಸಲಾಗುತ್ತಿದೆ. ಎಸ್ಪಿ ಮಿಥುನ್ ಕುಮಾರ್ ಸಹ ಬ್ಯಾಟ್ ಬೀಸಿರುವ ದೃಶ್ಯಗಳು ಲಭ್ಯವಾಗಿದೆ.

10 ತಂಡಗಳಿವೆ  ಇದರಲ್ಲಿ ಪೊಲೀಸ್ ಇಲಾಖೆ ಮಾಧ್ಯಮದವರು ಹಾಗೂ ಸ್ಥಳೀಯರು ಸೇರಿ 10ತಂಡಗಳನ್ನ ರಚಿಸಲಾಗಿದೆ. ಒಂದು ಪದ್ಯಾವಳಿಯಲ್ಲಿ 10 ಒವರ್ ಗಳನ್ನ ಎಸೆಯಲಾಗುತ್ತದೆ. ಒಟ್ಟು 5 ಓವರ್ ಗಳನ್ನ ಒಂದು ತಂಡ ಮಾಡಲಿದೆ. ಹೀಗೆ ಎರಡು ದಿನಗಳ ಕಾಲ ಮನರಂಜನೆಯೊಂದಿಗೆ ಸೌಹಾರ್ಧತೆ ಬೆಳೆಸಲು ಜಿಲ್ಲಾಡಳಿತ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ-https://suddilive.in/archives/7563

Related Articles

Leave a Reply

Your email address will not be published. Required fields are marked *

Back to top button