ಸ್ಥಳೀಯ ಸುದ್ದಿಗಳು

ಈಶ್ವರಪ್ಪ ಬಿರುಸಿನ ಪ್ರಚಾರ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಈಶ್ವರಪ್ಪ ಬೆಳ್ಳಂಬೆಳಿಗ್ಗೆ ಬಿರುಸಿನ ಪ್ರಚಾರ ಕೈಗೊಂಡಿದ್ದಾದೆ. ಇಂದು ಪುರಲೆಯ ಗಣಪತಿದೇವಸ್ಥಾನ ಮತ್ತು ಕರುಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಪುರಲೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಈಶ್ವರಪ್ಪ ಮತಯಾಚನೆ ನಡೆಸಿದರು. ನಂತರ ಕರುಮಾರಮ್ಮನ ದೇವಿಯ ದರ್ಶನ ಪಡೆದು 1989 ರಲ್ಲಿ ಬಿಜೆಪಿ ಅಭ್ಯರ್ಥಿಯಾದಾಗ ಗೆದ್ದ ಕ್ಷಣಗಳನ್ನ ನೆನಪಿಸಿಕೊಂಡರು. .

ಈ ವೇಳೆ ಸಭೆ ನಡೆಸಿ ಮಾತನಾಡಿದ ಈಶ್ವಪ್ಪ, ಪುರಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದೇನೆ. ನಾನು 1989 ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ಅತಿ ಹೆಚ್ಚು ಲೀಡ್ ಕೊಟ್ಟಿದ್ದ ಬೂತ್ ಗಳು ಇವು ಎಂದರು.

ಈಗಾಗಿ ಪುರಲೆಯ ಜನರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಗಣಪತಿ ದೇವಸ್ಥಾನದಲ್ಲಿ ‌ಪೂಜೆ ಸಲ್ಲಿಸಿ ಪ್ರಚಾರ ನಡೆಸಿದ್ದೇನೆ. ಮಾ.26 ರಂದು ಶುಭ ಮಂಗಳದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದೇನೆ ಭಾಗವಹಿಸುವಂತೆ ಕೋರಿದರು.

ಇದನ್ನೂ ಓದಿ-https://suddilive.in/archives/11334

Related Articles

Leave a Reply

Your email address will not be published. Required fields are marked *

Back to top button