ಜವರಾಯನ ಅಟ್ಟಹಾಸ, ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಾವು
ಸುದ್ದಿಲೈವ್/ಶಿವಮೊಗ್ಗ
ನಗರದ ಎಟಿಎನ್ ಸಿಸಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಕೆಲ ತಿಂಗಳಲ್ಲಿ ಪದವೀಧರನಾಗಬೇಕು ಎನ್ನುವಷ್ಟರಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಗೋಪಾಳದ ನಿವಾಸಿ ಸಿದ್ದರಾಮಪ್ಪನವರ ಪುತ್ರ ಪ್ರಜ್ವಲ್(20) ಸಕ್ರೆಬೈಲಿನ ಊಟಕ್ಕೆ ಸ್ನೇಹಿತರೊಂದಿಗೆ ತೆರಳಿದ್ದು ಊಟ ಮುಗಿಸಿಕೊಂಡು ಬರುವಾಗ ಕೆಂಪೇಗೌಡರ ಹೋಟೆಲ್ ಮುಂದಿನಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗಳಾಗಿದ್ದವು.
ನಿನ್ನೆ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಜ್ವಲ್ ತನ್ನ ಸ್ನೇಹಿತರಾದ ರೋಷನ್ ಮತ್ತು ಪವನ್ ನೊಂದಿಗೆ ನಿನ್ನೆ ಸುಮಾರು 12 ಗಂಟೆಯ ವೇಳೆಗೆ ಸಕ್ರೇಬೈಲಿನಲ್ಲಿ ಊಟಕ್ಕೆ ತೆರಳಿದ್ದಾನೆ. ಊಟ ಮುಗಿಸಿ ಪವನ್ ನನ್ನ ತನ್ನ ದ್ವಿಚಕ್ರ ವಾಹನದ ಹಿಂದೆ ಕೂರಿಸಿಕೊಂಡು ಹೋಗುವಾಗ ಪ್ರಜ್ವಲ್ ಕೆಂಪೇಗೌಡರ ಹೋಟೆಲ್ ನ ಮುಂಭಾಗದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಕೆ-14-ಈಕೆ-9467 ಕ್ರಮ ಸಂಖ್ಯೆಯ ದ್ವಿಚಕ್ರವಾಹನದಲ್ಲಿ ತೆರಳಿದ ಪ್ರಜ್ವಲ್ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣವೇ ಅಂಬ್ಯೂಲೆನ್ಸ್ ನಲ್ಲಿ ಪವನ್ ಮತ್ತು ಪ್ರಜ್ವಲ್ ನನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಜ್ವಲ್ ಸಾವನ್ನಪ್ಪಿರುವುದನ್ನ ವೈದ್ಯರು ಖಾತರಿ ಪಡಿಸಿದ್ದಾರೆ.
ಪವನ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ತುಂಗನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/7284