ಕ್ರೈಂ ನ್ಯೂಸ್

ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಮಂಜುನಾಥ್‌ ಹೃದಯಾಘಾತದಿಂದ ಸಾವು

ಸುದ್ದಿಲೈವ್/ಶಿವಮೊಗ್ಗ

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದ ಮಂಜುನಾಥ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ದೇವರ ದರ್ಶನ ಪಡೆದು ವಾಪಾಸ್ ಆಗುವ ವೇಳೆ ಈ ಘಟನೆ ನಡೆದಿದೆ.

ಕೇರಳದ ಪಂಪಾದಲ್ಲಿ ನಿನ್ನೆ ಮಂಜುನಾಥ್ (60)ಗೆ ಹೃದಯಾಘಾತವಾಗಿದೆ. ಶಿವಮೊಗ್ಗದ ವಿನೋಬನಗರ ನಿವಾಸಿಯಾಗಿರುವ ಅವರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲಾಧಾರಿಯಾಗಿ ತೆರಳಿದ್ದರು. ನಿನ್ನೆ ದರ್ಶನ ಮಾಡಿ ವಾಪಸ್  ಬರುವಾಗ ಪಂಪಾಗೆ ಬಂದಿದ್ದದ್ದರು.

ಪಂಪಾದಲ್ಲಿ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದಿದ್ದರು. ತಕ್ಷಣ ಕೊಟ್ಟಾಯಂ ಆಸ್ಪತ್ರೆಗೆ ಅವರ ಜೊತೆಗೆ ಬಂದಿದ್ದ ಭಕ್ತರ ಬಳಗ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆದಲ್ಲೇ ಮೃತಪಟ್ಟ ಅಸುನೀಗಿದ್ದಾರೆ. ಮೃತಪಟ್ಟ ಬಗ್ಗೆ  ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನ ಶಿವಮೊಗ್ಗಕ್ಕೆ ತರಲಾಗಿದೆ.

ಇದನ್ನೂ ಓದಿ-https://suddilive.in/archives/7280

Related Articles

Leave a Reply

Your email address will not be published. Required fields are marked *

Back to top button