ಎಣ್ಣೆ ಹೊಡೆಯಲು ಬಾ ಎಂದು ಕರೆದಿದ್ದಕ್ಕೆ ಹಲ್ಲೆ-ಆರೋಪಿಗಳು ಅಂದರ್
ಸುದ್ದಿಲೈವ್/ಶಿವಮೊಗ್ಗ
ಎಣ್ಣೆ ಹೊಡೆಯಲು ಬಾ ಎಂದಿದ್ದಕ್ಕೆ ಹಲ್ಲೆ ನಡೆದಿದೆ. ಹಲ್ಲೆಯ ಹಿನ್ನಲೆಯಲ್ಲಿ ಇಬ್ವರು ಆರೋಪಿಗಳನ್ನ ಬಂಧಿಸಲಾಗಿದೆ.
ಶರತ್ ಅಲಿಯಾಸ್ ಬಿಂದು ತಂದೆ ರವಿ (25) ಎಂಬಾತನು ಸ್ನೇಹಿತರಾದ ಸಂಪತ್, ಸಂತೋಷ, ಕುಮಾರ @ ರೆಡ್ಡಿ ಇವರೊಂದಿಗೆ ಸೇರಿಕೊಂಡು, ಮೇಲಿನ ತುಂಗಾನಗರ ಖಾಲಿ ಮೈದಾನದ, ಮರಳು ಹಾಕುವ ಜಾಗದ ಬಳಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದರು.
ಶರತ್ ಗೆ ಪರಿಚಯವಿರುವ ಶಾಹೀದ್ ಮತ್ತು ಇನ್ನೊಬ್ಬ ಶಾಹೀದ್ @ ಪತ್ಲಿ ಹಾಗು ಇನ್ನೊಬ್ಬ ಅಪರಿಚಿತ ವ್ಯಕ್ತಿ ಸೇರಿ ಮೂರು ಜನ ಬಂದಾಗ ಶಾಹೀದ್ ಗೆ ಬಾರೋ ಎಣ್ಣೆ ಕುಡಿಯೋಣ ಅಂತ ಕರೆದಿದ್ದಾನೆ. ಬರ್ತೀನಿ ತಾಳು ಎಂದು ಶಾಹೀದ್ ಹೇಳಿ ಹೋಗ್ತಾನೆ. ಎರಡು ಗಂಟೆ ಬಿಟ್ಟು ವಾಪಾಸ್ ಬರ್ತಾರೆ.
ಎಣ್ಣೆ ಕುಡಿಯುತ್ತಿದ್ದ ಸ್ಥಳಕ್ಕೆ ಬಂದು ಏಕಾಏಕಿ ಶಾಹೀದ್ ಎಂಬಾತನು ಶರತ್ ಗೆ ಅವ್ಯಾಚ್ಯ ಶಬ್ದಗಳಿಂದ ಬೈದು ನನಗೆ ಎಣ್ಣೆ ಹೊಡೆಲು ಕರೆಯುತ್ತೀಯಾ ನನ್ನ ಜೊತೆ ಈ ಹಿಂದೆ ಜಗಳ ಮಾಡಿ ಪುನಃ ಕರೆಯುತ್ತೀಯಾ ಅಂತ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಹಲ್ಲೆ ನಡೆಸಿ ಶರತ್ ಎಡ ಭಾಗಕ್ಕೆ ಗಾಯ ಮಾಡಿದ್ದಾನೆ. ಗಾಯಾಳು ಶರತ್ ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಹೀದ್ ಮತ್ತು ಶರತ್ ಮದ್ಯೆ ಈಗ್ಗೆ 2 ವರ್ಷಗಳ ಹಿಂದೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದರು. ಇದೇ ವಿಚಾರದ ದ್ವೇಷದಲ್ಲಿ ಎಣ್ಣೆ ಕುಡಿಯುವ ವೇಳೆ ಶಾಹೀದ್ ಗೆ ಕರೆದಿದ್ದಕ್ಕೆ ಶಾಹೀದ್ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಶರತ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಶಹೀದ್ ಮತ್ತು ಮತ್ತೋರ್ವ ಶಹೀದ್ ಯಾನೆ ಪತ್ಲಿಯನ್ನ ಬಂಧಿಸಲಾಗಿದೆ. ಇಬ್ಬರಿಗೂ ಜೆಸಿಯಾಗಿದೆ.
ಇದನ್ನೂ ಓದಿ-https://suddilive.in/archives/3563