ದಿಡೀರ್ ಬದಲಾವಣೆ, ಜ.21 ಮತ್ತು ಜ.22 ರಂದು ನೀರು ವ್ಯತ್ಯಯವಿರಲ್ಲ..!
ಸುದ್ದಿಲೈವ್/ಶಿವಮೊಗ್ಗ
ದಿಡೀರ್ ನಿರ್ಧಾರದ ಹಿನ್ನಲೆಯಲ್ಲಿ ಜ.21 ಮತ್ತು ಜ.22 ರಂದು ಕುಡಿಯುವ ನೀರು ವ್ಯತ್ಯಯವಾಗಲಿದೆ ಎಂದು ಪ್ರಕಟಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ ನಿರ್ಧಾರ ಬದಲಿಸಿದೆ.
ಜ.21 ಮತ್ತು 22 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಿರುವುದಿಲ್ಲವೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ಕೆಆರ್ ಎಸ್ ನಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಜ.21 ಮತ್ತು ಜ.22 ರಂದು ನಗರದಲ್ಲಿ ನೀರು ಸರಬರಾಜು ಇಲ್ಲವೆಂದು ಮಂಡಳಿ ಪ್ರಕಟಣೆಯಲ್ಲಿ ಪ್ರಕಟಿಸಿತ್ತು.
ಆದರೆ ದಿಡೀರ್ ನಿರ್ಧಾರದ ಹಿನ್ನಲೆಯಲ್ಲಿ ಮಂಡಳಿ ನೀರು ಸಬರಾಜುವಿನಲ್ಲಿ ವ್ಯತ್ಯಾಸವಿಲ್ಲವೆಂದು ಸ್ಪಷ್ಟಪಡಿಸಿದೆ. ಇಡೀ ವಿಶ್ವವೇ ಅಯೋಧ್ಯ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿ ಮುಳುಗಿರುವ ಸಮಯದಲ್ಲಿ ಶಿವಮೊಗ್ಗ ನಗರದ ಜನತೆ ನೀರಿಗಾಗಿ ಪರದಾಡುವಂತೆ ಆಗಿದೆ ಎಂದು ಸುದ್ದಿ ಮಾಡಿತ್ತು.
ಸುದ್ದಿ ಪ್ರಕಟವಾಗಿ ಸ್ವಲ್ಪ ಗಂಟೆಯಲ್ಲೇ ನೀರು ವ್ಯತ್ಯಯವಿಲ್ಲವೆಂದು ಮಂಡಳಿ ಸ್ಪಷ್ಟಪಡಿಸಿದೆ. ಸುದ್ದಿಲೈವ್ ವರದಿಯಿಂದ ಮಂಡಳಿ ನಿರ್ದಾರವನ್ನ ಬದಲಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ವರದಿ ಬಂದ ಬೆನ್ನಲ್ಲೇ ನಿರ್ಧಾರ ಬದಲಿಸಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ-https://suddilive.in/archives/7272