ರಾಜಕೀಯ ಸುದ್ದಿಗಳು

ಬಿಜೆಪಿಗೆ ಕಾಂಗ್ರೆಸ್ ನಿಂದ ಮಾಸ್ಟರ್ ಸ್ಟ್ರೋಕ್!?

ಸುದ್ದಿಲೈವ್/ಶಿವಮೊಗ್ಗ

ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ತನಿಕೆಯಾಗಬೇಕೆಂದು ಕಾಂಗ್ರೆಸ್ ಪಕ್ಷ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.‌

ಚುನಾವಣೆಯ ಹೊಸ್ತಿನಲ್ಲಿರುವ ವೇಳೆ ಕಾಂಗ್ರೆಸ್ ನ ಈ ಹೊಡೆತಕ್ಕೆ ಬಿಜೆಪಿಯನ್ನ ಅಲುಗಾಡಿಸುವಂತೆ ಮಾಡಿದೆ. ಬಿಜೆಪಿಗೆ ಇದೂ ಒಂದು ಮಾಸ್ಟರ್ ಸ್ಟ್ರೋಕ್ ಆಗಿ ಪರಿಣಮಿಸಿದೆ. ಇವೆಲ್ಲವೂ ಚುನಾವಣೆಯ ವರೆಗೆ ನಡೆಯಲಿದೆ ಎಂಬ ವಿಷಯ ತಿಳಿದಿದ್ದರೂ ಕಾಂಗ್ರೆಸ್ ನ  ಹೊಡೆತಕ್ಕೆ ಬಿಜೆಪಿ ಅಕ್ಷರಶಃ ನಲುಗಲು ಆರಭಿಸಿದೆ.‌

ದಿನಾಂಕ: 17.01.2024 ರಂದು ಸೊರಬ ವಿಧಾನ ಸಭಾ ಕ್ಷೇತ್ರದ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜನ ತಿಳುವಳಿಕೆ ಕಾರ್ಯಕ್ರಮ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸಂಪೂರ್ಣ ಬಿಜೆಪಿ ಕಾರ್ಯಕ್ರಮದಂತೆ ಬಿಂಬಿಸಿ ಕಾರ್ಯಕ್ರಮದಲ್ಲಿ ನೀರೂಪಣೆ ಮತ್ತು ವೇದಿಕೆಯಲ್ಲಿ ಅತಿಥಿಗಳನ್ನಾಗಿ ಬಿಜೆಪಿ ಪಕ್ಷದ ಮುಖಂಡರನ್ನು ಬಳಸಿಕೊಂಡಿರುವುದು ಶಿಷ್ಠಾಚಾರದ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಆಗ್ರಹಿಸಿದೆ.

ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲೀಡ್ ಬ್ಯಾಂಕ್ ಶಿವಮೊಗ್ಗದವರು ವಹಸಿಕೊಂಡಿದ್ದು, ಲೋಕ ಸಭಾ ಸದಸ್ಯರ ಸೂಚನೆಯಂತೆ ಇಡೀ ಕಾರ್ಯಕ್ರಮವನ್ನು ಸಂಘಟಿಸಿರುವುದು ಖಂಡನೀಯ ಎಂದು‌ ಸಮಿತಿ ಆರೋಪಿಸಿದೆ.

ಆದ್ದರಿಂದ ಸೊರಬ ತಾಲೂಕಿನಲ್ಲಿ ನಡೆದ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಂಪೂರ್ಣ ತನಿಕೆ ನಡೆಸಿ, ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಿ ಆಡಳಿತ ದುರುಪಯೋಗ ಪಡಿಸಿಕೊಂಡಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಮಿತಿ ಜಿಲ್ಲಾಧಿಕಾರಿಗಳಿಗೆ ನೀಡಿರುವ‌ ಮನವಿಯಲ್ಲಿ ಆಗ್ರಹಿಸಿದೆ.‌

ಹಳೇ ಜೈಲಿಗೆ ಅಲ್ಲಮನ ಹೆಸರು, ವಿಕಸಿತ ಯಾತ್ರೆಯ ಕುರಿತು ತನಿಖೆಗೆ ಆಗ್ರಹಗಳೆಲ್ಲಾ ಮತಗಳನ್ನ ಪಡೆಯಲು ಸಾಧ್ಯವಿಲ್ಲವೆಂದಿದ್ದರೂ‌ ಬಿಜೆಪಿಯ ಶಿಷ್ಠಾಚಾರ ಉಲ್ಲಂಘನೆಯನ್ನ ಎತ್ತಿಹಿಡಿಯುವ ಮೂಲಕ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್ ನೀಡುತ್ತಿದೆ ಎನ್ನಬಹುದು

ಇದನ್ನೂ ಓದಿ-https://suddilive.in/archives/7147

Related Articles

Leave a Reply

Your email address will not be published. Required fields are marked *

Back to top button