ಅಣ್ಣನ ಬಳಿ ಹಣವಿದೆ ಹುಡಿ ಹಾರಿಸುತ್ತಾರೆ ಎಂದುಶಾಸಕ ಬೇಳೂರು ಗುಟರ್ ಹಾಕಿದ್ದು ಯಾರಿಗೆ?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾಶಿವರಾಜ್ ಕುಮಾರ್ ಆಯ್ಕೆಯಾಗಿದ್ದು ಅವರನ್ನಗೆಲ್ಲಿಸಿಕೊಂಡೇ ಬರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಂಸದ ರಾಘವೇಂದ್ರರಿಗೆ ಈ ಬಾರಿ ಟಕ್ಕರ್ ನೀಡಲಾಗುತ್ತದೆ. ಈಡಿಗರ ಸಮಾವೇಶದಲ್ಲಿ ಸಂಸದರ ಹಡಬ್ಬೆ ದುಡ್ಡು ಚೆಲ್ಲಿ ಸಮಾವೇಶ ಮಾಡಲಾಗಿದೆ. ಅಣ್ಣನ ಹತ್ತಿರ ಬಹಳ ದುಡ್ಡು ಇದೆ. ಚೀಲ ಚೀಲ ಹಣಹಂಚಿದ್ದಾರೆ ಎಂದು ಗುಡುಗಿದರು.
ರಾಜ್ಯದ ಅಧ್ಯಕ್ಷರು ಅವರ ಸಹೋದರ ಇರುವುದರಿಂದ ಚುನಾವಣೆಯನ್ನ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಕ್ಷೇತ್ರದಲ್ಲಿ ಇರಲೇ ಬೇಕು ಎಂದೇನಿಲ್ಲ. ನಾವೆಲ್ಲ ಇದ್ದೀವಿನಾವು ಗೆಲ್ಲುತ್ತೇವೆ ಎಂದಿರುವ ಶಾಸಕರು ದಲಿತ ಸಿಎಂಕೂಗಿನಹಿಂದೆ ಹಿತಾಸಕ್ತಿ ಇದೆ ಅದನ್ನನಾನು ಖಂಡಿಸುವುದಾಗಿ ಹೇಳಿದರು.
ನಾನು ಸಹ ಸಂಸದನ ಸ್ಥಾನಕ್ಕೆಆಕಾಂಕ್ಚಿ ಎಂದು ಹೇಳಿದ್ದೆ. ಡಿಸಿಎಂ ಡಿಕೆಶಿಯವರು ಮಾತನಾಡಿ ಸಲಹೆ ಸೂಚನೆ ನೀಡಿದ್ದಾರೆ. ಹಾಗಾಗಿ ನಾನು ವಾಪಾಸ್ ಆಗಿರುವೆ. ಸಂಸದ ರಾಘವೇಂದ ನಾಲ್ಕುವರೆ ವರ್ಷ ಮಲ್ಕೊಂಡಿರುತ್ತಾರೆ. 6 ತಿಂಗಳು ಚುನಾವಣೆಗಾಗಿ ಓಡಾಡುತ್ತಾರೆ. ಅಭಿವೃಧ್ದಿ ಶೂನ್ಯವಾಗಿದೆ ಎಂದರು.
ಬೆಂಗಳೂರು ಶಿವಮೊಗ್ಗ ರಸ್ತೆ 18 ವರ್ಷದಿಂದ ಆಹಿಲ್ಕ. ಮಂಗಳೂರು ಪೂನಾ ರಸಗತೆ ಮಾಡಿದ್ದೀರಾ? 4 ವರ್ಷದಲ್ಲಿ ರಸ್ತೆ ಮಾಡುವುದಾಗಿ ಅವರ ಅಭಿವೃದ್ಧಿಯಾಗಿದ್ದಾರೆ. ಆಸ್ತಿ ಮಾಡಿಕೊಂಡಿದ್ದಾರೆ. ಬೇಕಾದಷ್ಟು ಆಸ್ತಿ ಮಾಡಿದ್ದಾರೆ. ಹಡ್ಬೆ ದುಡ್ಡಿನಲ್ಲಿ ಹುಡಿ ಹಾರಿಸುತ್ತಾರೆ. ನಾವು ಶಿವಮೊಗ್ಗ ಗೆಲ್ಲುವ ಜೊತೆಗೆ ರಾಜ್ಯದಲ್ಲಿ 20 ಸ್ಥಾನ ಗೆಲ್ತೀವಿ ಎಂದರು.
ಇದನ್ನೂ ಓದಿ-https://suddilive.in/archives/10370