ಕ್ರೈಂ ನ್ಯೂಸ್

ಮನೆಗಳ್ಳನ ಬಂಧನ

ಸುದ್ದಿಲೈವ್/ಶಿವಮೊಗ್ಗ

2023 ನೇ ಸಾಲಿನ ಮನೆಗಳ್ಳತನ ಪ್ರಕರಣವನ್ನ ಬೇಧಿಸುವಲ್ಲಿ ಶಿರಾಳಕೊಪ್ಪ ಪೊಲೀಸರು ಪ್ರಕರಣವನ್ನ ಪತ್ತೆಹಚ್ಚಿ ಅಂತರಾಜ್ಯ ನಿವಾಸಿಯನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಶಿರಾಳಕೊಪ್ಪ ಟೌನ್ ಭೋವಿ ಕಾಲೋನಿಯ ವಾಸಿಯಾದ  ಪ್ರಭಾಕರ ಶಿಲ್ಪಿ ಅವರ ಮನೆಯ ಹಿಂಬಾಗಿಲಿನಿಂದ  ಒಳಗೆ ಬಂದು ಬೀರುವಿನಲ್ಲಿದ್ದ ಅಂದಾಜು ಮೌಲ್ಯ 6,81,000/- ರೂಗಳ ಬಂಗಾರದ ಆಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ* ಮಾಡಿಕೊಂಡು ಹೋಗಿದ್ದರು.‌ ಡಿ. 28 ರಂದು ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ,ಮತ್ತು ಕಾರಿಯಪ್ಪ ಎ. ಜಿ,  ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ರುದ್ರೇಶ್ ಪಿಎಸ್ಐ ಮಂಜುನಾಥ ಎಸ್ ಕುರಿ ಮತ್ತು ಪುಷ್ಪಾ, ಪಿಎಸ್ಐ ಕೆಂಚಪ್ಪ,  ಎಎಸ್ಐ ರಮೇಶ್ ನಾಯ್ಕ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್, ಮಹದೇವ್ ಮತ್ತು ಪಿಸಿ ಸಲ್ಮಾನ್, ಕಾರ್ತಿಕ್, ಅಶೊಕ, ನಾಗರಾಜ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಹೆಚ್.ಸಿ ಇಂದ್ರೇಶ್, ಗುರುರಾಜ್, ವಿಜಯ್ ಮತ್ತು ಬೆರಳು ಮುದ್ರೆ ಘಟಕದ ತ್ಯಾಗರಾಜ್ ಮತ್ತು ಕಿರಣ್ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.‌

ತನಿಖಾ ತಂಡವು ಇಂದು ಆರೋಪಿ ಖಾಜಾ ಹಾವೇರಿ @ ಖಾಜಾ, 24 ವರ್ಷ, ಜನ್ನತ್ ನಗರ ಹುಬ್ಬಳ್ಳಿ, ಹಾಲೀ ವಾಸ ವಾಸ್ಕೊ ಗೋವಾ, ಈತನನ್ನು ಬಂಧಿಸಲಾಗಿದೆ. ಮನೆಗಳ್ಳತನ ಪ್ರಕರಣ ಮತ್ತು ಹಾನಲ್ ಪೊಲೀಸ್ ಠಾಣೆಯ ದ್ವಿ ಚಕ್ರ ವಾಹನ ಕಳ್ಳತನ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 6,81,200/- ರೂಗಳ 111.85 ಗ್ರಾಂ ತೂಕ ಬಂಗಾರ ಆಭರಣ ಮತ್ತು 326 ಗ್ರಾಂ ತೂಕದ ಬೆಳ್ಳಿಯ ಆಭರಣ ಮತ್ತು ಅಂದಾಜು ಮೌಲ್ಯ 35,000/- ರೂಗಳ ಒಂದು ದ್ವಿ ಚಕ್ರ ವಾಹನ ಸೇರಿ ಒಟ್ಟು 7,16,200/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.‌

ಇದನ್ನೂ ಓದಿ-https://suddilive.in/archives/7123

Related Articles

Leave a Reply

Your email address will not be published. Required fields are marked *

Back to top button