ಸ್ಥಳೀಯ ಸುದ್ದಿಗಳು

ಬಹುಕೋಟಿ ಟೆಂಡರ್ ದಾರರಿಗೆ ಮಣೆಹಾಕುವುದನ್ನ‌ ಬಿಡಿ!

ಸುದ್ದಿಲೈವ್/ಶಿವಮೊಗ್ಗ

ವಿದ್ಯುತ್ ಕಾಮಗಾರಿಯಲ್ಲಿ ನಿರ್ವಹಿಸಬೇಕಿರುವ ಕಾನಗಾರಿಯನ್ನ ಕ್ರೂಢೀಕರಿಸಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕಿರುವ ಕಾಮಗಾರಿಯನ್ನ ಆರ್ ಸಿ ಮತ್ತು ಬಹುಕೋಟಿ ಟೆಂಡರ್ ದಾರರಿಗೆ ನೀಡುತ್ತಿರುವುದನ್ನ ಖಂಡಿಸಿ ಇಂದು ಶಿವಮೊಗ್ಗದ ಮೆಸ್ಕಾಂ ಕಚೇರಿಯ ಮುಂದೆ ಪ್ರತಿಭಟಿಸಲಾಯಿತು.

ಕಾಮಗಾರಿಗಳನ್ನ ಸ್ಥಳೀಯರಿಗೆ ನೀಡುವಂತೆ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಸಮಿತಿ ಕಚೇರಿಯ ಮುಂದೆ ಪ್ರತಿಭಟಿಸಿದೆ.

ವಿದ್ಯುತ್ ಕಾಮಗಾರಿಗಳನ್ನ ಸ್ಥಳೀಯರಿಗೆ ಟೆಂಡರ್ ನೀಡಬೇಕೆಂದು ಸರ್ಕಾರಿ ಆದೇಶವಿದ್ದರೂ ಮೆಸ್ಕಾಂ ಅಧಿಕಾರಿಗಳು ಆರ್ ಸಿ ಮತ್ತು ಬಹುಕೋಟಿ ಟೆಂಡರ್ ದಾರರಿಗೆ ನೀಡುತ್ತಿದ್ದಾರೆ. ಇದರಿಂದ ಸ್ಥಳೀಯ ಗುತ್ತಿಗೆ ದಾರರಿಗೆ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಗಂಗಾ ಕಲ್ಯಾಣ, ಹೊಸ‌ಸಂಪರ್ಕ, ಅಕ್ರಮ ಸಕ್ರಮ, ಮುರಿದ ಕಂಬಗಳ ಕಾಮಗಾರಿಯನ್ನ ಕ್ರೂಢೀಕರಿಸಿ ಸ್ಥಳೀಯ ಗುತ್ತಿಗೆದಾರರಿಗೆ ನೀಡದೆ ಬೃಹತ್ ಮೊತ್ತದ ಆರ್ ಸಿ ಮತ್ತು ಟೆಂಡರ್ ಕರೆದಿರುವುದನ್ನ ರದ್ದು ಪಡಿಸಬೇಕು, 1 ರಿಂದ 5 ಲಕ್ಷದ ವರೆಗಿನ ಟೆಂಡರ್ ಗಳನ್ನ ಸ್ಥಳೀಯರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಏಪ್ರಿಲ್ 2023 ರಿಂದ ಇದುವರೆಗೂ 1 ಲಕ್ಷದಿಂದ 5 ಲಕ್ಷ ರೂ ವರೆಗೆ ಟೆಂಡರ್ ಕರೆದಿಲ್ಲ. ಕಾಮಗಾರಿಯ ಮೇಲಿನ 5% ಮೇಲ್ವಿಚಾರಣೆ ಶುಲ್ಕನ್ನ ರದ್ದು ಪಡಿಸಬೇಕು ಹಾಗೂ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಸಮಿತಿ ಮನವಿಯಲ್ಲಿ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/7043

Related Articles

Leave a Reply

Your email address will not be published. Required fields are marked *

Back to top button