ಭಕ್ತಿ ಮೆರೆದ ಫುಟ್ ಬಾಲ್ ರಾಮಣ್ಣ-ಜಿಲ್ಲಾಡಳಿತ ರಾಮಣ್ಣರ ಬೇಡಿಕೆ ಪರಿಗಣಿಸಲಿ
ಸುದ್ದಿಲೈವ್/ಶಿವಮೊಗ್ಗ
ಫುಟ್ ಬಾಲ್ ರಾಮಣ್ಣ ವಯಸ್ಸು 65 , ಜನವರಿ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆಗಾಗಿ ನಗರದ ಎನ್ ಟಿ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಗೋಡೆಗಳಿಗೆ ರಾಮನ ಕುರಿತು ಚಿತ್ರವನ್ನ ಬರೆದಿದ್ದಾರೆ.
ಅಯೋಧ್ಯ ಬಾಲರಾಮ ಲೋಕಾರ್ಪಣೆಯ ವೇಳೆ ನಾನಾ ರೀತಿ ಉಡುಗರೆ ನೀಡಲಾಗುತ್ತಿದೆ. ಫುಟ್ ಬಾಲ್ ರಾಮಣ್ಣ ತಮಗೆ ತಿಳಿದಿರುವ ವಿದ್ಯೆಯನ್ನ ಧಾರೆ ಎರೆದಿದ್ದಾರೆ. ಪಿಯರ್ ಲೈಟ್ ಪಕ್ಕದಲ್ಲಿಯೇ ವಾಸಿ ಆಗಿರುವ ರಾಮಣ್ಣ ರಾಮಾಯಣದ ಚಿತ್ರವನ್ನ ಬರೆದು ಭಕ್ತ ಮೆರೆದಿದ್ದಾರೆ.
ನಿನ್ನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಡಗಲಬಂಡೆ ಗ್ರಾಮದ ನಿವಾಸಿಗಳು ಶಿವಮೊಗ್ಗದ ಮಾಜಿ ಸಚಿವ ಈಶ್ವರಪ್ಪನವರ ಮೂಲಕ ಗದ್ದುಗೆ ಕಂಬಳಿಯನ್ನ ಅಯೋಧ್ಯ ರಾಮಮಂದಿರ ಉದ್ಘಾಟನೆಗೆ ಕಳುಹಿಸಿದರೆ ಶಿವಮೊಗ್ಗದಫುಟ್ಬಾಲ್ ರಾಮಣ್ಣ ತನ್ನ ಭಕ್ತಿಯನ್ನಮೆರೆದು ಗಮನ ಸೆಳೆದಿದ್ದಾರೆ.
1975 ರಿಂದ 1980 ರವರೆಗೆ ನ್ಯಾಷನಲ್ ಫುಟ್ಬಾಲ್ ಆಟಗಾರರಾಗಿ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿದ್ದರು. ಈಗ ವಯಸ್ಸಿನ ನಿಮಿತ್ತ ತಾವು ಕಲಿತಿರುವ ಗೋಡೆ ಚಿತ್ರ ಬರಹವನ್ನ ನಂಬಿ ಬದುಕು ಸಾಗಿಸಿದ್ದಾರೆ.
ಅವರನ್ನ ಭೇಟಿಯಾದ ಸುದ್ದಿಲೈವ್ ರೊಂದಿಗೆ ಮಾತನಾಡಿದ ರಾಮಣ್ಣ 1000 ಕೋಟಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆದಿದೆ ಚಿತ್ರ ಬರಹದ ಕಾಮಗಾರಿ ನೀಡಿದ್ದರು ಬದುಕಬಹುದಿತ್ತು. ನನ್ನ ಹಾಗೆ ನೂರಾರು ಜನ ಶಿವಮೊಗ್ಗದಲ್ಲಿ ಕಲಾವಿದರು ಇದ್ದಾರೆ. ಅವರನ್ನ ಸ್ಥಳೀಯ ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಯೋಜನೆ ಗುರುತಿಸಲಿ ಎಂದು ರಾಮಣ್ಣ ತಮ್ಮಬೇಡಿಕೆಯನ್ನ ಇಟ್ಟಿದ್ದಾರೆ. ರಾಮಣ್ಣನ ಬೇಡಿಕೆಯನ್ನ ಜಿಲ್ಲಾಡಳಿತ ಗುರುತಿಸಲಿ ಎಂಬುದು ನ್ಯೂಸ್ ವೆಬ್ ಸೈಟ್ ನ ಆಶಯ
ಇದನ್ನೂ ಓದಿ-https://suddilive.in/archives/7026