ರಾಜ್ಯ ಸುದ್ದಿಗಳುರಾಷ್ಟ್ರೀಯ ಸುದ್ದಿಗಳು

ತಾತ್ಕಾಲಿಕ ಮಾರ್ಗ ಬದಲಾವಣೆ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಹೆದ್ದಾರಿ-369 ಕಿ.ಮೀ 509+860 ರಿಂದ 513+400 ರವರೆಗೆ ಹೊಳೆಹೊನ್ನೂರು ಪಟ್ಟಣದಲ್ಲಿನ ರಸ್ತೆಗೆ ಡಾಂಬರೀಕರಣ ಮಾಡಲು ನ.28 ರಿಂದ 30 ರವರೆಗೆ ಕಾಮಗಾರಿಯನ್ನು ನಡೆಸಬೇಕಾಗಿರುವುದರಿಂದ ಈ ಕೆಳಕಂಡಂತೆ ಬದಲಿ ರಸ್ತೆಯಲ್ಲಿ ವಾಹನಗಳು ತಾತ್ಕಾಲಿಕವಾಗಿ ಸಂಚಾರ ಮಾಡಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ಶಿವಮೊಗ್ಗದಿಂದ ಚಿತ್ರದುರ್ಗದ ಕಡೆಗೆ ಹೋಗುವ ವಾಹನಗಳು ಶಿವಮೊಗ್ಗ-ಹೊಳಲೂರು-ಮಂಗೋಟೆ-ಅರಹತೊಳಲು-ಕೈಮರ ಮೂಲಕ ಚಿತ್ರದುರ್ಗಕ್ಕೆ ಸಂಚರಿಸುವುದು. ಹಾಗೂ ಚಿತ್ರದುರ್ಗದಿಂದ ಶಿವಮೊಗ್ಗ ಕಡೆಗೆ ಬರುವ ವಾಹನಗಳು ಕೈಮರದಿಂದ ಆನವೇರಿ ರಸ್ತೆಯ ಮುಖಾಂತರ ಮಂಗೋಟೆ, ಹೊಳಲೂರು ಮಾರ್ಗವಾಗಿ ಹಾಗೂ ಕೈಮರದಿಂದ ದಾಸರಕಲ್ಲಹಳ್ಳಿ-ಅಗಸನಹಳ್ಳಿ-ನಾಗತೀಬೆಳಗಲು-ತಳ್ಳಿಕಟ್ಟೆ-ಬಾಬಳ್ಳಿ-ಭದ್ರಾವತಿ ಮುಖಾಂತರ ಶಿವಮೊಗ್ಗ ಕಡೆಗೆ ಸಂಚರಿಸುವುದು.

ಇದನ್ನೂ ಓದಿ-https://suddilive.in/archives/3856

Related Articles

Leave a Reply

Your email address will not be published. Required fields are marked *

Back to top button