ಕ್ರೈಂ ನ್ಯೂಸ್

ವೈಯುಕ್ತಿಕ ವಿಚಾರದಲ್ಲಿ ಗಲಾಟೆ-ಓರ್ವನಿಗೆ 8 ಹೊಲಿಗೆ

ಸುದ್ದಿಲೈವ್/ಶಿವಮೊಗ್ಗ

ವೈಯುಕ್ತಿಕ ವಿಚಾರಕ್ಕೆ ವ್ಯಕ್ತಿಯೋರ್ವನ ಮೇಲೆ 6 ಜನ ಹಲ್ಲೆನಡೆಸಿದ್ದು ಹಲ್ಲೆಗೊಳಗಾದ ವ್ಯಕ್ತಿಯ ಕೈಗೆ‌ 8 ಹೊಲಿಗೆ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಬ್ರೇಜ್ ಎಂಬಾತನನ್ನ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೈವೆ ರಸ್ತೆಗೆ ಹರಕೆರೆಯಲ್ಲಿದ್ದ ಆಸ್ತಿ ರಸ್ತೆ ಅಭಿವೃದ್ಧಿಗೆ ಹೋಗಿದ್ದು, ಕುಟುಂಬಕ್ಕೆ  ಬಂದ ಹಣದ ವಿಚಾರದಲ್ಲಿ ಗಲಾಟೆ ನಡೆದಿದೆ. ತಾವು ಕೇಳಿದಷ್ಟು ಹಣ ನೀಡಿಲ್ಲವೆಂಬ ಕಾರಣಕ್ಕೆ ಮೊಹಮ್ಮದ್ ಹಫೀಸುಲ್ಲಾ ಎಂಬಾತನನ್ನ ಚಾಕುವುನಿಂದ ಇರಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನ್ಯೂ ಮಂಡ್ಲಿ ಬಳಿ ಬೈಕ್ ನಲ್ಲಿ ಬರುವಾಗ ಮೊಹ್ಮದ್ ಹಫೀಜುಲ್ಲಾ ರವರ ಕೈಗೆ ಇರಿಯಲಾಗಿದೆ. ಹಫೀಜುಲ್ಲಾ ಕೈಗೆ 8 ಹೊಲಿಗೆ ಹಾಕಲಾಗಿದೆ. ಹಲ್ಲೆಗೂ ಮುನ್ನಾ  ಮನೆಹತ್ತಿರ ಬಂದು ಸಂತ್ರಸ್ತ್ರರನ್ನ ಕಾಡಿದ ವಿಡಿಯೋ ಸಹ ವೈರಲ್ ಮಾಡಲಾಗಿದೆ.

ಹಲ್ಲೆಗೆ ಸಂಬಂಧಿಸಿದಂತೆ ತಯ್ಯೂಬ್ ಎಂಬರವನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಉಳಿದ ಐವರಿಗೆ ಖಾಕಿ ಪಡೆ ಬಲೆ ಬೀಸಿದೆ. ಒಟ್ಟಿನಲ್ಲಿ ಪರಿಹಾರಕ್ಕೆ ಬಂದ ಹಣ ಸಂಬಂಧಿಕರ ನಡುವಿನ ಗಲಾಟೆಗೆ ಕಾರಣವಾಗಿದೆ.

2020 ರ ಸಂದರ್ಭದಲ್ಲಿ ಮಾಹಾದೇವಿ ಚಲನಚಿತ್ರ ಮಂದಿರದ ಹಿಂಭಾಗದಲ್ಲಿ ವ್ಯಾನ್ ನಲ್ಲಿ ಓರ್ವ ಮಹಿಳೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರ ಕೈವಾಡವಿದೆ ಎಂಬ ಆರೋಪವನ್ನ ಹಫೀಜುಲ್ಲಾ ಕುಟುಂಬ ಮಾಡಿದೆ. ಈ ಪ್ರಕರಣದಲ್ಲಿ ಜೀವಬೆದರಿಕೆಯನ್ನ ಹಾಕಿರುವುದರಿಂದ ನಮಗೆ ನ್ಯಾಯ ಮತ್ತು ರಕ್ಷಣೆ ಬೇಕಿದೆ ಎಂದು ಕುಟುಂಬ ಆಗ್ರಹಿಸಿದೆ.‌

ಇದನ್ನೂ ಓದಿ-https://suddilive.in/archives/6820

Related Articles

Leave a Reply

Your email address will not be published. Required fields are marked *

Back to top button