ಕ್ರೈಂ ನ್ಯೂಸ್

ಎಳೆನೀರು ಮಾರಾಟ ವಿಚಾರದಲ್ಲಿ ಗಲಾಟೆ-ಓರ್ವನಿಗೆ ಮಚ್ಚಿನಿಂದ ಹಲ್ಲೆ

ಸುದ್ದಿಲೈವ್/ಭದ್ರಾವತಿ

ಎಳನೀರು ಮಾರಾಟ ಮಾಡುವ ವಿಚಾರದಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ. ಓರ್ವನನ್ನ‌ ಮಚ್ಚಿನಿಂದ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಭದ್ರಾವತಿ ನಗರದ ಅಂಡರ್ ಬ್ರಿಡ್ಜ್ ಹತ್ತಿರ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಎಳನೀರು ಮಾರಾಟದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು ಸಲೀಂಖಾನ್ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ.

ಹಲ್ಲೆಗೊಳಗಾದ ಸಲೀಂಖಾನ್ (24) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದರೂ ಆತ ಸಧ್ಯಕ್ಕೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಖಚಿತಗೊಂಡಿಲ್ಲ.ನೌಶದ್ ಎಂಬಾತನಿಂದ ಹಲ್ಲೆ ನಡೆದಿದೆ.

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಪ್ರಕರಣದ ಪ್ರಾಥಮಿಕ ಮಾಹಿತಿ ಇಷ್ಟಿದ್ದು ಹೆಚ್ಚಿನ‌ಮಾಹಿತಿಗಾಗಿ ಕಲೆಹಾಕಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/4510

Related Articles

Leave a Reply

Your email address will not be published. Required fields are marked *

Back to top button