ಕ್ರೈಂ ನ್ಯೂಸ್

ಹಿಂಜಾವೇಯ ಶಿವಕುಮಾರ್ ಮೇಲೆ ಹಲ್ಲೆ-ಹಲ್ಲೆ ನಡೆದಿದ್ದು ವೈಯುಕ್ತ ವಿಚಾರಕ್ಕಾ?

ಸುದ್ದಿಲೈವ್/ಶಿವಮೊಗ್ಗ

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಶಿವಕುಮಾರ್  ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಹಲ್ಲೆ ನಡೆಸಿರುವ ಬಗ್ಗೆ ಸ್ವಲ್ಪ ಗುಮಾನಿಗಳು ಕೇಳಿ ಬರುತ್ತಿದೆ.

ಶಿವಕುಮಾರ್ ಏರ್ ಪೋರ್ಟ್ ನ ಟ್ಯಾಕ್ಸಿ ಡ್ರೈವರ್ ಆಗಿದ್ದು ನಿನ್ನೆ ಶಿವಕುಮಾರ್ ಏರ್ ಪೋರ್ಟ್ ನಿಂದ ಪ್ಯಾಸೆಂಜರ್ ನ್ನ ಪಿಕಪ್ ಮಾಡಿಕೊಂಡು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಾಸ್ ಏರ್ ಪೋರ್ಟ್ ಗೆ ಹೋಗುವ ಮಾರ್ಗಮಧ್ಯೆಯಲ್ಲಿ ಟ್ಯಾಕ್ಸಿಯನ್ನ ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಲಾಗಿದೆ.

ಎನ್ ಟಿ ರಸ್ತೆಯ ವಿಜಯ್ ಮೋಟಾರ್ ಮುಂಭಾಗದಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಯುವಕರು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ಶಿವಕುಮಾರ್ ಯುವಕರ ಬೈಗುಳಕ್ಕೆ ಪ್ರತಿಕ್ರಿಯೆಸದೆ ಮುಂದೆ ಹೋಗುವಾಗ ಇನ್ನಿಬ್ಬರು ಬೈಕ್ ಗಳನ್ನ ಟ್ಯಾಕ್ಸಿಗೆ ಅಡ್ಡಗಟ್ಟಿ ಇಳಿದು ಬಂದು ಕೈ ಕೈ ಮಿಲಾಯಿಸಿದ್ದಾರೆ. ನಿನ್ನ ಕಾರು ನಂಬರ್ ನೋಡಿಕೊಂಡಿದ್ದೇವೆ ನಿಮ್ಮವರ ಆಟ ನಡೆಯೊಲ್ಲ ಎಂದು ದಬಾಯಿಸಿದ್ದಾರೆ.

ಸ್ಥಳೀಯರು ಜಗಳ ಬಿಡಿಸಿದ ಪರಿಣಾಮ ಶಿವಕುಮಾರ್ ಯಾವುದೇ ಪ್ರಾಣಕ್ಕೆ ಹಾನಿ ಉಂಟಾಗಿಲ್ಲ. ಶಿವಕುಮಾರ್ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಶಿವಕುಮಾರ್ ಹಿಂದೂ ಜಾಗರಣ ವೇದಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಘಟನೆ ನಡೆದಿರುವುದು ಸಂಘಟನೆಯ ಕೆಲಸದಿಂದನಾ? ಅಥವಾ  ವೈಯುಕ್ತಿಕ ಕಾರಣಕ್ಕೆ ಅಟ್ಯಾಕ್ ಆಗಿದೆಯಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಇದನ್ನೂ ಓದಿ-https://suddilive.in/archives/6832

Related Articles

Leave a Reply

Your email address will not be published. Required fields are marked *

Back to top button