ಕ್ರೈಂ ನ್ಯೂಸ್

ಹಳೆಯ ಕಸಾಯಿಖಾನೆ ಬಳಿ ಪತ್ತೆಯಾದ ಎರಡು ಎತ್ತುಗಳು-ಕುತೂಹಲಕ್ಕೆ ಕಾರಣವಾಯಿತು ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ತೋಟವೊಂದರಲ್ಲಿ ನಿಂತಿದ್ದ ಎರಡು ಎತ್ತುಗಳನ್ನ ಬಜರಂಗದಳದ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದು ಈಗ ಎರಡು ಎತ್ತುಗಳನ್ನ ಜ್ಞಾನೇಶ್ವರಿ ಗೋಶಾಲೆಯಲ್ಲಿ ಬಿಡಲಾಗಿದೆ.

ಎತ್ತುಗಳನ್ನ ತಂದಿದ್ದ ವಾಹನವನ್ನ ವಿನೋಬ ನಗರ ಪೊಲೀಸ್ ಠಾಣೆಗೆ ತಂದಿರಸಲಾಗಿದೆ. ವಾಹನಗಳಿಗೆ ಮತ್ತು ಎತ್ತು ಎತ್ತಿಕೊಂಡು ಸಾಗಾಣೆಕೆಗೆ ಬೇಕಾಗಿರುವ ದಾಖಲಾತಿಯನ್ನ ಪೊಲೀಸರು ಕೇಳಲಾಗಿದ್ದು, ಈ ದಾಖಲೆಗಳು ಪೊಲೀಸರ ಕೈ ಸೇರಬೇಕಿದೆ. ಪರಿಶೀಲನೆ ನಡೆಸಿ ಇಲಾಖೆ ಮುಂದಿನ ಕ್ರಮ ಜರುಗಿಸಲಿದೆ. . ವಾಹನಗಳಿಗೆ ಮತ್ತು ಎತ್ತು ಎತ್ತಿಕೊಂಡು ಸಾಗಾಣೆಕೆಗೆ ಬೇಕಾಗಿರುವ ದಾಖಲಾತಿಯನ್ನ ಪೊಲೀಸರು ಕೇಳಲಾಗಿದ್ದು, ಈ ದಾಖಲೆಗಳು ಪೊಲೀಸರ ಕೈ ಸೇರಬೇಕಿದೆ. ಪರಿಶೀಲನೆ ನಡೆಸಿ ಇಲಾಖೆ ಮುಂದಿನ ಕ್ರಮ ಜರುಗಿಸಲಿದೆ.

ಈ ಹಿಂದೆ ಕಸಾಯಿ ಖಾನೆಯನ್ನಾಗಿ ಬಳಸಿಕೊಳ್ಳಲಾಗುತ್ತಿದ್ದ ತೋಟದಲ್ಲಿ ಎರಡು ಎತ್ತುಗಳು ಪತ್ತೆಯಾಗಿರುವುದು ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿ ಎತ್ತುಗಳನ್ನ ಬಿಟ್ಟಿರುವುದು ಸಂಘಟನೆ ಅನುಮಾಮಕ್ಕೆ ಕಾರಣವಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ಹೋರಿ ಹಬ್ಬಕ್ಕೆ ತೆಗೆದುಕೊಂಡು ಹೋಗಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಶಿಕಾರಿಪುರದ ಬಳಿ ಹೋರಿಹಬ್ಬಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ ಹಬ್ಬ ಮುಗಿಸಿಕೊಂಡು ವಾಪಾಸ್ ಕರೆತರುವಾಗ ತೋಟದಲ್ಲಿ ತಂದಿರಸಲಾಗಿದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಸಧ್ಯಕ್ಕೆ ಗೋವುಗಳನ್ನ ಗೋಶಾಲೆಗೆ ಬಿಡಲಾಗಿದೆ. ಗೋವುಗಳನ್ನ ಎಲ್ಲೇ ಸಾಗಿಸಲು ಆರ್ ಟಿ ಒ ಅನುಮತಿ ಕಡ್ಡಾಯವಾಹಿದೆ ಎಂಬುದು ಬಜರಂಗದಳದ ಕಾರ್ಯಕರ್ತರ ವಾದವಾಗಿದೆ.

ಸಧ್ಯಕ್ಕೆ ಈ ಪ್ರಕರಣ ಏನಾಗಲಿದೆ ಎಂಬ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ-https://suddilive.in/archives/3526

Related Articles

Leave a Reply

Your email address will not be published. Required fields are marked *

Back to top button