ಕ್ರೈಂ ನ್ಯೂಸ್

ಭದ್ರಾವತಿಯಲ್ಲಿ ಯುವಕನ ಮೇಲೆ ಹಲ್ಲೆ-ಮಂಡೇನಕೊಪ್ಪದಲ್ಲಿ ಚಿಕ್ಕಪ್ಪನಿಂದಲೇ ಅಣ್ಣನ‌ಮಗನ ಮೇಲೆ ಇರಿತ

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ತಾಲೂಕಿನ ಬಾಬಳಿ ಗ್ರಾಮದಲ್ಲಿ ಓರ್ವನ ಮೇಲೆ ಮೂವರು ಯುವಕರು ಅಯುಧದಿಂದ ಹಲ್ಲೆ ನಡೆಸಿದ್ದು‌ ಹಲ್ಲೆಗೊಳಗಾದ ಯುವಕನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ‌

ಭದ್ರಾವತಿಯ ಬಾಬಳಿ ಗ್ರಾಮದಲ್ಲಿ ಹೇಮಂತ್ ಎಂಬ ಯುವಕನಿಗೆ ವೈಯುಕ್ತಿಕ ಕಾರಣಕ್ಕೆ ಬೆಳಿಗ್ಗೆ ಹಲ್ಲೆ ನಡೆಸಲಾಗಿತ್ತು. ಹೇಮಂತ್ ಮೇಲೆ ಯಾಕೆ ಹೊಡೆದಿದ್ದೀರಿ ಎಂದು ಹೇಮಂತ್ ಪರಮೇಶ್ವರ್ ಎಂಬಾತನನ್ನ ಕರೆದುಕೊಂಡು ಹೋಗಿ ಕೇಳಿದಾಗ ಪರಮೇಶ್ ನ ತಲೆಯ ಮೇಲೆ ಅಯುದದಿಂದ ಹಲ್ಲೆ ನಡೆಸಲಾಗಿದೆ.

ಪರಮೇಶ್ ನ ತಲೆಯ ಮೇಲೆ ಗಾಯಗಳಾಗಿವೆ. ಗಾಯಗೊಂಡ ಪರಮೇಶ್ ನನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮೆಗ್ಗಾನ್ ಗೆ ದಾಖಲಿಸಲಾಗಿದೆ.  ಆತನ ಮೇಲೆ ನಡೆದ ಹಲ್ಲೆಯನ್ನ ಹಿಂದೂ ಸಂಘಟನೆಗಳು ಅನ್ಯಕೋಮಿನ ಯುವಕನಿಂದ  ನಡೆದಿದೆ ಎಂದು ಆರೋಪಿಸಿದೆ.  ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಹಣದ ವಿಚಾರದಲ್ಲಿ ಸನಾವುಲ್ಲಾ ಎಂಬುವನು ಹೇಮಂತ್ ಮೇಲೆ ಹಲ್ಲೆ ನಡೆಸಿದ್ದು, ಹೇಮಂತ್ ಪರಮೇಶ್ ನಿಗೆ ವಿಷಯ ತಿಳಿಸಿದ್ದು ಪರಮೇಶ್ ಸನಾವುಲ್ಲನ ಬಳಿ ಬಂದಾಗ ಸನಾವುಲ್ಲಾ ಇದು ವೈಯು್ತಿಕ ವಿಚಾರ ಯಾಕೆ ಮಧ್ಯ ಬರ್ತಾ ಎಂದು ಪರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಡೇನಕೊಪ್ಪದಲ್ಲಿ ಹಲ್ಲೆ

ಶಿವಮೊಗ್ಗದ ಮಂಡೇನಕೊಪ್ಪದಲ್ಲಿ ಚಿಕ್ಕಪ್ಪ ಉಮೇಶ ನಿಂದಲೇ ಅಣ್ಣನ ಮಗನ ಮೇಲೆ ಹಲ್ಲೆ ನಡೆದಿದೆ. ಕಸ ಹಾಕಿರುವ ವಿಚಾರದಲ್ಲಿ ಯಾವಾಗಲೂ ಗಲಾಟೆಯಾಗುತ್ತಿದ್ದು ಚಿಕ್ಕಪ್ಪ ಉಮೇಶ್ ಅಣ್ಣನ‌ಮಗ ಆಕಾಶನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/5922

Related Articles

Leave a Reply

Your email address will not be published. Required fields are marked *

Back to top button