ಕ್ರೈಂ ನ್ಯೂಸ್
ಕ್ಷಣ ಕ್ಷಣಕ್ಕೂ ಸ್ಪೋಟಗೊಳ್ಳುತ್ತಿದೆ ಪೋಷಕರ ಆಕ್ರೋಶ
ಸುದ್ದಿಲೈವ್/ಶಿವಮೊಗ್ಗ
ಆದಿಚುಂಚನಗಿರಿಯ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಮೇಘಳ ಸಾವಿನ ಕುರಿತಂತೆ ಕಾಲೇಜಿನ ಒಳಗಡೆಯ ಕೊಠಡಿಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದರೆ ಹೊರಗಡೆ ಮೃತ ವಿದ್ಯಾರ್ಥಿನಿ ತಾಯಿ ಮತ್ತು ಅವರ ಸಂಬಂಧಿಕರ ಆಕ್ರೋಶ ಕ್ಷಣ ಕ್ಷಣಕ್ಕೂ ಹೆಚ್ಚಾಗಿದೆ.
ಕಳೆದ ಒಂದೂವರೆ ಗಂಟೆ ಹಿಂದೆ ಸಿಸಿ ಟಿವಿ ವಿಡಿಯೋ ಪರಿಶೀಲನೆಗೆಂದು ಮೃತ ವಿದ್ಯಾರ್ಥಿನಿಯ ಕಡೆಯವನ್ನ ಒಳಗಡೆ ಕರೆದೊಯ್ಯಲಾಗಿದ್ದು ಹೊರಗಡೆ ಬಂದಿಲ್ಲ. ಒಳಗಡೆ ಏನೋ ನಡೆಯುತ್ತಿದೆ. ಕೇಸ್ ಮುಚ್ಚಿಹಾಕಲು ಒತ್ನಿಸಲಾಗುತ್ತಿದೆ ಎಂದು ಮೇಘಶ್ರೀಯ ತಾಯಿ ಮತ್ತು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಮಗೆ ಯಾವುದೇ ಮಾತುಕತೆ ಬೇಡ ಪ್ರಾಂಶುಪಾಲರನ್ನ ಬಂಧಿಸಬೇಕೆಂದು ಸಂಬಂಧಿಕರು ಕಾಲೇಜಿನ ಮುಂಭಾಗದಲ್ಲಿ ದಿಡೀರ್ ಪ್ರತಿಭಟನೆ ನಡೆಸಿದ್ದಾರೆ. ಒಟ್ಟಿನಲ್ಲಿ ಹೊರಗಡೆ ಇರುವ ಪೋಷಕರ ತಾಳ್ಮೆ ಸ್ಪೋಟಗೊಳ್ಳುತ್ತಿದೆ.
ಇದನ್ನೂ ಓದಿ-https://suddilive.in/archives/4324