ಲೋಕಸಭಾ ಚುನಾವಣೆಯ ಆಕಾಂಕ್ಷಿ ನಾನಲ್ಲ-ರಾಮ್ ದಾಸ್-ಯುವನಿಧಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ದುರುಪಯೋಗ-ದತ್ತಾತ್ರಿ
ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಅಲ್ಲ. ಎಂದು ಮಾಜಿ ಸಚಿವ ರಾಮ್ ದಾಸ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಸೂಚನೆ ಬಂದರೆ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮ ಪ್ರಶ್ಬೆಗೆ ಉತ್ತರಿಸಿದ ಅವರು, ಸಂಘಟನೆಯಲ್ಲಿ ಕೃಷ್ಣರಾಜ ಕ್ಷೇತ್ರ ನಂಬರ್ ಕ್ಷೇತ್ರವಾಗಿದೆ. ಕೇಂದ್ರದ ಯೋಜನೆಯನ್ನ ಜನರಿಗೆ ಮುಟ್ಟಿಸಲು ಸಂಘಟನೆ ಪ್ರಬಲವಾಗಿ ಕಟ್ಟಲಾಗಿದೆ ಎಂದರು.
ಆದರೂ ನನ್ನನ್ನ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನ ಬಿಡಲು ಸೂಚಿಸಿತ್ತು. ಬಿಟ್ಟುಒಟ್ಟಿದ್ದೇನೆ. 36 ಕ್ಷೇತ್ರದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಬಾವುಟಹಾರಿಸಲಾಗಿದೆ. ಈ ಬಾರಿಯೂ ಲೋಕಸಭಾಕ್ಷೇತ್ರದಲ್ಲಿ ಬಿಜೆಪಿಯೇ ಅರಳೋದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡ ದತ್ತಾತ್ರಿ ಮಾತನಾಡಿ, ಯೋಗೀಶ್ ಅಕ್ರಮವಾಗಿ ಕ್ಲಾಸ್ ರೂಂ ಗೆ ಹೋಗಿ ಯುವನಿಧಿ ಕಾರ್ಯಕ್ರಮಕ್ಕೆ ಕರೆದಿರುವ ಬಗ್ಗೆ ಮಾಹಿತಿ ಇದೆ. ಕಾಲೇಜಿನ ಪ್ರಾಂಶು ಪಾಲರಿಗೆ ಸೂಚಿಸಿ ಕಾರ್ಯಕ್ರಮಕ್ಕೆ ಬರಲು ಸೂಚಿಸಬೇಕು. ಹಾಗಾಎನದರೂ ಕರೆಯಬೇಕೆಂದರೆ ಕಾಂಪೌಂಡ್ ಹೊರಗೆ ನಿಂತು ಪ್ರಚಾರ ಮಾಡಬೇಕಿತ್ತು ಕ್ಲಾಸ್ ರೂಂ ಒಳಗೆ ಹೋಗಿ ಕರೆದಿರುವುದು ಸರಿಯಲ್ಲ ಎಂದರು.
ಪದವಿ ಓದುವವರಿಗೆ ಕರೆಯಬೇಕಿತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕರೆಯಲಾಗುತ್ತಿದೆ ಡಿಸಿ ಕ್ರಮ ಕೈಗೊಳ್ಳಬೇಕಿದೆ. ಕಾಂಗ್ರೆಸ್ ನ ಯುವನಿಧಿ ಕಾರಗಯಕ್ರಮವಿದ್ದರೂ ಇದು ಸರ್ಕಾರದ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ದುರುಪಯೋಗ ಮಾಡಿಕೊಳ್ಳುವುದನ್ನ ಡಿಸಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ-https://suddilive.in/archives/6430