ಕ್ರೈಂ ನ್ಯೂಸ್
ಪಟಾಕಿ ಸಿಡಿಸಿ ವಿಕೃತಿ ಮೆರುದ್ರಾ ಯುವಕರು??
ಸುದ್ದಿಲೈವ್/ಶಿವಮೊಗ್ಗ
ಬಸವನಗುಡಿ ನಾಲ್ಕನೇ ತಿರುವಿನಲ್ಲಿ ಬೇರೆಯವರ ಮನೆಯ ಮುಂದೆ ಪಟಾಕಿ ಸಿಡಿಸಿ ಯುವಕರಿಬ್ಬರು ವಿಕೃತಿ ಮೆರೆದಿರುವ ಘಟನೆ ನಿನ್ನೆ ರಾತ್ರಿ 7-30 ರ ಸಮಯದಲ್ಲಿ ನಡೆದಿದೆ.
ನಾಲ್ಕನೇ ತಿರುವಿನಲ್ಲಿ ಮಾಜಿ ಕಾರ್ಪರೇಟರ್ ಅವರ ಮನೆಯ ಹತ್ತಿರ ಬೈಕ್ ನಲ್ಲಿ ಬಂದ ಯುವಕರಿಬ್ಬರು ಗರ್ನಲ್ ಸಿಡಿಸಿ ವಿಕೃತಿ ಮೆರೆದಿದ್ದರು. ಈ ಘಟನೆಯಿಂದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.
ಈ ಘಟನೆ ಎರಡು ಮೂರು ಬಾರಿ ಮರುಕಳಿಸಿದ್ದರಿಂದ ಕುಟುಂಬ ಆತಂಕ ಗೊಂಡು ಜಯನಗರ ಪೊಲೀಸರಿಗೆ ಮಾಹಿತಿ ತಿಳಿಸಿದೆ. ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದು ಎಫ್ಐಆರ್ ಆಗುವ ಸಾಧ್ಯತೆ ಹೆಚ್ಚಿದೆ.
ಪಟಾಕಿ ಸಿಡಿಸಲು ಅಭ್ಯಂತರವಿಲ್ಲ. ಆದರೆ ಬೇರೆಯವರ ಮನೆಯ ಮುಂದೆ ಅಥವಾ ಪಟಾಕಿ ಸಿಡಿಸುವುದು ಇನ್ನೊಬ್ಬರಿಗೆ ತೊಂದರೆ ಆದಲ್ಲಿ ಕಾನೂನು ಅಡ್ಡಬರಲಿದೆ.
ಇದನ್ನೂ ಓದಿ-https://suddilive.in/archives/6373