ಕೆಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ
ಸುದ್ದಿಲೈವ್/ಶಿವಮೊಗ್ಗ
ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಹಿಂದಿನಿಂದ ಬಂದ ಕೆಎಸ್ ಆರ್ ಟಿ ಸಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನನಿಗೆ ತಲೆಯ ಹಣೆಯ ಭಾಗಕ್ಕೆ ಪಕ್ಕೆಲುಬು ಹಾಗು ದೇಹದ ಇತರೆ ಭಾಗಗಗಳಿಗೆ ಹೊಡೆತ ಬಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಧಿನಗರದ ಮೆಡಿಕಲ್ ನಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದ ಚೀಲೂರಿನ ನಿವಾಸಿ ದೀಪಕ್ ರಾಜು (35) ಜ.2 ರಂದು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿಕೊಂಡು ವಾಪಾಸ್ ಚೀಲೂರಿಗೆ ಎಲೆಕ್ಟ್ರಿಕ್ ಬೈಕ್ ನಲ್ಲಿ ಹೋಗುವಾಗ ಹೊಳಲೂರು ಬಳಿ ಹಿಂಬದಿಯಿಂದ ಬಂದ ಕೆಎ 18 ಎಫ್ 0915 ಕ್ರಮ ಸಂಖ್ಯೆಯ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ.
ಸಾರ್ವಜನಿಕರು ಅಪಘಾತ ನಡೆದ ಬಗ್ಗೆ ದೀಪಕ್ ರಾಜು ಅವರ ಪತ್ನಿ ಮತ್ತು ಪ್ರದೀಪ್ ಎಂಬುವರಿಗೆ ತಿಳಿಸಿದ್ದು ಸ್ಥಳಕ್ಕೆ ಬಂದ ಇಬ್ಬರು 108 ಅಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಪಘಾತ ಪಡಿಸಿದ ಬಸ್ ನ್ನ ಠಾಣೆಗೆ ತಂದಿರಿಸಲಾಗಿದೆ.
ಇದನ್ನೂ ಓದಿ-https://suddilive.in/archives/6195