ಸಂಸದ ರಾಘವೇಂದ್ರ ಟೆಂಪಲ್ ರನ್-ಸಂಸದರಿಗೆ ಕಂಬಳಿ ಹೊದಿಸಿ ಕುರಿ ಗಿಫ್ಟ್ ನೀಡಿದ ಕುರುಬ ಸಮಾಜ!
ಸುದ್ದಿಲೈವ್/ಶಿಕಾರಿಪುರ
ನಾಳೆ ಬಿಜೆಪಿ ಅಭ್ಯರ್ಥಿಯಾಗಿ ನಾಳೆ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸುತ್ತಿದ್ದು ಇಂದಿನಿಂದಲೇ ಟೆಂಪಲ್ ರನ್ ಆರಂಭಿಸಿದ್ದಾರೆ.
ಬುಧವಾರ ಶಿಕಾರಿಪುರ ತಾಲ್ಲೂಕು ಮುಗುಳಗೆರೆ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಬೀರಲಿಂಗೇಶ್ವರ ದೇವರಿಗೆ ನಾಮಪತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಾಳೆ ಶಿವಮೊಗ್ಗದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ನಡೆಸಿ ಡಿಸಿ ಕಚೇರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿ ಫಾರಂ ಅರ್ಜಿಗೆ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ಸಂಸದರಿಗೆ ಕುರುಬ ಸಮಾಜದ ಮುಖಂಡರು ಕಂಬಳಿ ಹೊದಿಸಿ ಕುರಿ ಗಿಫ್ಟ್ ನೀಡಿದರು.
ನಂತರ ಶಿಕಾರಿಪುರ ನಗರದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿಂದ ನಗರದ ರಾಯರ ಮಠಕ್ಕೆ ತೆರಳಿದ ಸಂಸದರು ಹಾಗೂ ಕುಟುಂಬ ವರ್ಗದವರು ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ರಾಯರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡ ನಿವೇದಿತ ರಾಜು. ಗುರುಮೂರ್ತಿ. ಅಪರ್ಣ ಗುರುಮೂರ್ತಿ. ಸಿದ್ದಲಿಂಗಪ್ಪ ನಿಂಬೆಗೊಂದಿ. ಈರನಗೌಡ, ಗಾಯತ್ರಿ ಮಲ್ಲಪ್ಪ, ಬಸವರಾಜ್, ಹಾಗೂ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/13006