ಕ್ರೈಂ ನ್ಯೂಸ್

ರಸ್ತೆ ಅಪಘಾತ-ದ್ವಿತೀಯ ವರ್ಷದ ಬಿಕಾಂ‌ ಯುವತಿ ಸಾವು

ಸುದ್ದಿಲೈವ್/ಶಿವಮೊಗ್ಗ

ವಿಂಡ್ ವೀಲ್ ನೋಡಿ ವಾಪಾಸ್ ಶಿವಮೊಗ್ಗಕ್ಕೆ ಬರುವ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿ ಸಾವು ಕಂಡಿದ್ದಾಳೆ.

ವಿಂಡ್ ವೀಲ್ ನೋಡಿಕೊಂಡು ಸವಳಂಗ ರಸ್ತೆ ಮೂಲಕ ಬರುತ್ತಿರುವಾಗ ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಮೇಲಿದ್ದ ಕಬ್ಬಿಣದ ಅಂಗಡಿಗೆ ಗುದ್ದಿದ್ದಾರೆ. ಭದ್ರಾವತಿಯ ಸ್ಪೂರ್ತಿ ಪುರಾಣಿಕ್ ಮತ್ತು ಹಿಂಬದಿ ಕುಳಿತಿದ್ದ ಹರ್ಷ ಎಂಬಾತನಿಗೆ ತೀರ್ವ ಗಾಯಗಳಾಗಿವೆ.

ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಪೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೆಎ 15 ಎಕ್ಸ್ 7237 ಕ್ರಮ ಸಂಖ್ಯೆಯ ಹೋಂಡ ಆಕ್ಟಿವ್ ವಾಹನದಲ್ಲಿ ಹೋಗುವಾಗ ಜ.13 ರಂದು ಮದ್ಯಹ್ನ 2 ಗಂಟೆಗೆ ಅಪಘಾತ ಸಂಭವಿಸಿದೆ. ಸಂಜೆ 4-25 ರ ಸಮಯದಲ್ಲಿ ಸ್ಪೂರ್ತಿ ಅಸುನೀಗಿದ್ದಾರೆ.

ಸ್ಪೂರ್ತಿ ಶಿವಮೊಗ್ಗದ ಎನ್ ಇಎಸ್ ಐಎಎಸ್ ನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದರು. ಸ್ನೇಹಿತರಾದ ಆದರ್ಶ, ಸುಬ್ರಹ್ಮಣ್ಯ, ಓಂಕಾರ್, ಹರ್ಷ ಛಾಯಾ ಅಮಿತ್ ರೊಂದಿಗೆ ವಿಂಡ್ ವೀಲ್ ನೋಡಲು‌ ಸವಳಂಗದ ಬಳಿ ವಿಂಡ್ ವೀಲ್ ನೋಡಲು ತೆರಳಿದ್ದರು. ವಾಪಾಸ್ ಬರುವಾಗ‌ ಕಲ್ಲಾಪುರದ ಬಳಿ ಈ ಘಟನೆ ನಡೆದಿದೆ.

ಇದನ್ನು ಓದಿ-https://suddilive.in/archives/6939

Related Articles

Leave a Reply

Your email address will not be published. Required fields are marked *

Back to top button