ಸ್ಥಳೀಯ ಸುದ್ದಿಗಳು

ರಸ್ತೆ ಅಪಘಾತದಲ್ಲಿ ಹೊನ್ನವಿಲೆ ಯುವಕರು ಸಾವು

ಸುದ್ದಿಲೈವ್/ಭದ್ರಾವತಿ

ಬರ್ತಡೇ ಆಚರಿಸಿಕೊಳ್ಳಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀಗೆಬಾಗಿ ಗ್ರಾಮದ ಬಳಿ‌ ಘಟನೆ ನಡೆದಿದೆ.

ಬೊಲೆರೋ ವಾಹನ ಹಾಗು ಬೈಕ್ ನಡುವೆ ಢಿಕ್ಕಿ ಉಂಟಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ರಮೇಶ್ (23), ಚೇತನ್ (23) ಮೃತ ದುರ್ದೈವಿಗಳಾಗಿದ್ದಾರೆ.

ಇಬ್ಬರು ಭದ್ರಾವತಿ ತಾಲೂಕಿನ ಹೊನ್ನವಿಲೆ ಗ್ರಾಮದ ನಿವಾಸಿಗಳಾಗಿದ್ದಾರೆ. ಹೊನ್ನವಿಲೆ ಗ್ರಾಮದಿಂದ ನಿನ್ನೆ ರಾತ್ರಿ ಭದ್ರಾವತಿಗೆ ತೆರಳುತ್ತಿದ್ದರು. ಬೊಲೆರೋ ಚಾಲಕನಿಗು ಗಂಭೀರ ಗಾಯ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5958

Related Articles

Leave a Reply

Your email address will not be published. Required fields are marked *

Back to top button