ತುಂಗನಗರ ಪೊಲೀಸರ ಭರ್ಜರಿ ಭೇಟೆ
ಸುದ್ದಿಲೈವ್/ಶಿವಮೊಗ್ಗ
ಮನೆಗಳವು ಪ್ರಕರಣವನ್ನ ತುಂಗನರ ಪೊಲೀಸರು ಬೇಧಿಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಊರುಗಡೂರಿನ 12 ನೇ ತಿರುವಿನಲ್ಲಿರುವ ಸಹೀಬಾಬಾನುವರ ಮನೆ, ಇಂದಿರಾನಗರದ ಸಾದಿಕ್ ರೆಹಮಾನ್, ಎಂಜಿ ಲೇಔಟ್ ನ ಪವಿತ್ರ ಜಿಎಂ, ಸ್ವಾಮಿ ವಿವೇಕಾನಂದ ಬಡಾವಣೆಯ ಚಂದ್ರವತಿ, ಗೋವಿಂದಾಪುರದ ವಿಜಯಲಕ್ಷ್ಮಿ ಎಂಬುವರ ಮನೆಯಲ್ಲಿ ಮಾರ್ಚ್, ಎಪ್ರಿಲ್, ಅಕ್ಟೋಬರ್ ತಿಂಗಳಲ್ಲಿ ಮನೆಗಳವು ಪ್ರಕರಣ ದಾಖಲಾಗಿತ್ತು.
4.72 ಲಕ್ಷ, 2.95 ಲಕ್ಷ, 1,17 ಲಕ್ಷ 3.72 ಲಕ್ಷದ ರೂ. ಚಿನ್ನಾಭರಣಗಳ ಮತ್ತು ಬೆಳ್ಳಿ ಹಾಗೂ ನಗದು ಕಳುವಾಗಿದ್ದವು. ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್, ಬಿ ಮೇಲ್ವಿಚಾರಣೆಯಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್.ಬಿ. ರವರ ನೇತೃತ್ವದ, ಪಿಎಸ್ಐಗಳಾದ ಶಿವಪ್ರಸಾದ್ ವಿ., ಮಂಜುನಾಥ್, ರಘುವಿರ್ ಎಮ್. ಕುಮಾರ ಕೂರಗುಂದ, ದೂದ್ಯಾನಾಯ್ಕ, ಎಎಸ್ಐ ಮನೋಹರ್ ಹಾಗೂ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಮತ್ತು ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ. ಹಾಗೂ ಚೇತನ ರವರಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ದಿನಾಂಕಃ 20-12-2023 ರಂದು ಆರೋಪಿತರಾದ 1) ಸಂತೋಷ @ ಎಮ್ಮೆ ಸಂತೋಷ, 36 ವರ್ಷ, ಮಾಗಡಿ ರಸ್ತೆ ಬೆಂಗಳೂರು, ಸ್ವಂತ ವಿಳಾಸ ಶಿವಪ್ಪ ಬಡಾವಣೆ, ಅಲ್ಲೂರು ರಸ್ತೆ ಪಿರಿಯಾಪಟ್ಟಣ ಮೈಸೂರು ಜಿಲ್ಲೆ, 2) ಮಹಮದ್ ನದ್ದಿಮ್ @ ನದ್ದಿಮ್ @ ನದ್ದು, 30 ವರ್ಷ, ಅಶೋಕ ನಗರ, ಶಿವಮೊಗ್ಗ, 3) ಇಮ್ರಾನ್, 32 ವರ್ಷ, ಅಶೋಕನಗರ, ಶಿವಮೊಗ್ಗ ಮತ್ತು 4) ಸುರೇಶ್ ಕೆ, 43 ವರ್ಷ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಶಿವಮೊಗ್ಗ ಇವರನ್ನ ದಸ್ತಗಿರಿ ಮಾಡಲಾಗಿದೆ.
ಆರೋಪಿತರಿಂದ 12,65,000/- ರೂಗಳ 230 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 72,000/- ರೂಗಳ 1 ಕೆಜಿ 200 ಗ್ರಾಂ ಬೆಳ್ಳಿ ಆಭರಣಗಳು, ರೂ 25,140/- ನಗದು ಹಣ, ಅಂದಾಜು ಮೌಲ್ಯ 10,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು ರೂ 13,87,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/5102