ಕ್ರೈಂ ನ್ಯೂಸ್

ಬೆಳ್ಳಂಬೆಳಿಗ್ಗೆ ಸರಗಳ್ಳರ ಅಟ್ಟಹಾಸ

ಸುದ್ದಿಲೈವ್/ಶಿವಮೊಗ್ಗ

ವಿಳಾಸ ಕೇಳುವ ನೆಪದಲ್ಲಿ ಬಂದ ಬೈಕ್ ಸವಾರರು ಮಹಿಳೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ನಗರದ ಗುಂಡಪ್ಪ ಶೆಡ್‌ನಲ್ಲಿ ಸರಗಳ್ಳತನ ನಡೆದಿದೆ. ಇವತ್ತು ಬೆಳಗ್ಗೆ ಐದು ಗಂಟೆ ಸುಮಾರಿಗೆ ಕೆಎಸ್‌ ಈ‍ಶ್ವರಪ್ಪನವರ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಎದುರಿನಿಂದ ಬಂದ ಬೈಕ್ ಸವಾರರು ಮಾತನಾಡಸಿದ್ದಾರೆ.

ಮಲ್ಲೇಶ್ವರ ನಗರದಲ್ಲಿ ಇವತ್ತು ಬೆಳಗಿನ ಜಾವ ನಡೆದ ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೇ ಬೈಕ್‌ನಲ್ಲಿ ಬಂದ ಇಬ್ಬರು, ಅದೇ ದಾರಿಯಲ್ಲಿ ಬರುತ್ತಿದ್ದ ಮಹಿಳೆಯರನ್ನ ಅಡ್ಡಗಟ್ಟಿದ್ದಾರೆ. ಮಹಿಳೆಯರು ಆತಂಕಗೊಂಡು ಹಿಂದೆ ಸರಿದಿದ್ದಾರೆ. ಆಗ ಬೈಕ್‌ ಸವಾರರು ವಿಳಾಸ ಕೇಳಿದ್ದಾರೆ. ಆ ಬಳಿಕ ಬೈಕ್‌ ಸವಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಹಿಳೆಯರು ಮುಂದಕ್ಕೆ ಹೋಗಿದ್ದಾರೆ.

ಅಲ್ಲಿವರೆಗೂ ನಾಟಕ ಮಾಡುತ್ತಿದ್ದ ಬೈಕ್‌ ಸವಾರರ ಪೈಕಿ ಹಿಂಬದಿ ಸವಾರ ಬೈಕ್‌ನಿಂದ ಕೆಳಕ್ಕೆ ಇಳಿದು ಮಹಿಳೆಯರನ್ನ ಬೆನ್ನತ್ತಿದ್ದಾನೆ. ಹಿಂಬದಿಯಿಂದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಮರಳಿ ಬೈಕ್‌ ಹತ್ತಿದ್ದಾನೆ ಬೈಕ್‌ ಸ್ಟಾರ್ಟ್‌ ಮಾಡಿಟ್ಟುಕೊಂಡಿದ್ದ ಇನ್ನೊಬ್ಬ ಸವಾರ, ಸರ ಕಳ್ಳ ಬೈಕ್‌ ಏರುತ್ತಲೇ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.

ಬೆಳಗಿನ ಜಾವ ಮನೆ ಮುಂದೆ ನೀರು ಹಾಕುತ್ತಿದ್ದ ಜನರಿಗೂ ಈ ದೃಶ್ಯ ಕಾಣಿಸಿದ್ದು, ಮಹಿಳೆಯರು ಕೂಗಿಕೊಂಡ ಬಳಿಕ ಕಳ್ಳರನ್ನ ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಘಟನೆಯಲ್ಲಿ ಮಹಿಳೆಯ 30 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ ಎಂದು ತಿಳಿದುಬಂದಿದ್ದ ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಇದೀಗ ಪರಿಶೀಲನೆ ನಡೆಸ್ತಿದ್ದಾರೆ.

ಇದನ್ನೂ ಓದಿ-https://suddilive.in/archives/12065

Related Articles

Leave a Reply

Your email address will not be published. Required fields are marked *

Back to top button