ಕ್ರೈಂ ನ್ಯೂಸ್
ಸುರೇಶ್ ಯಾನೆ ಕಳ್ಳ ಸೂರಿ ಮರ್ಡರ್
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಬಾಪೂಜಿ ನಗರದಲ್ಲಿ ಸುರೇಶ್ ಯಾನೆ ಕಳ್ಳ ಸೂರಿ ಎಂಬುವನನ್ನ ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣಗಳು ತಿಳಿದು ಬರಬೇಕಿದೆ.
ಬಾಪೂಜಿನಗರದ ಆದಿಪರಾಶಕ್ತಿ ಗಂಗಮ್ಮ ದೇವಸ್ಥಾನದ ಬಳಿ ಸರೇಶ್ ಯಾನೆ ಕಳ್ಳ ಸೂರಿಯ ಮೇಲೆ ಅನೇಕ ಮನೆಗಳ್ಳತನದ ಆರೋಪಗಳಿವೆ. ಇತ್ತೀಚೆಗೆ ಆತನ ಮನಸಿಕ ಅಸ್ವಸ್ಥನಾಗಿರುವಂತೆ ವರ್ತಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಬ್ಯಾಟ್ ನಲ್ಲಿ ಹೊಡೆದು ಕೊಲೆ ಮಾಡಿರುವುದಾಗಿ ಹೇಳಾಗುತ್ತಿದೆ. ಕೊಲೆಗೆ ವೈಯುಕ್ತಿಕ ಕಾರಣಗಳು ಎಂದು ಹೇಳಲಾಗುತ್ತಿದ್ದರೂ ಅನೈತಿಕ ಸಂಬಂಧದ ಶಂಕೆ ಸಹ ವ್ಯಕ್ತವಾಗುತ್ತಿದೆ.
ಇವಿಷ್ಟು ಪ್ರಾಥಮಿಕ ಮಾಹಿತಿ ಎನಿಸಿದರೂ ಹೆಚ್ಚಿನ ಮಾಹಿತಿಯನ್ನ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ದೇಹವನ್ನ ಮೆಗ್ಗಾನ್ ಶವಗಾರಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ-https://suddilive.in/archives/13324