ರಾಜಕೀಯ ಸುದ್ದಿಗಳು

ಕಾಡುಹಂದಿ ಮಾಂಸ ತಿನ್ನಲು ರೈತರಿಗೆ ಅವಕಾಶ ಕೊಡಿ-ಆರಗ

ಸುದ್ದಿಲೈವ್/ಬೆಳಗಾವಿ

ಬೆಳೆ ಹಾನಿ ಮಾಡುವ‌ ವನ್ಯಜೀವಿಗಳಿಂದ ರೈತನಿಗೆ ಸರ್ಕಾರ ರಕ್ಷಣೆನೀಡಬೇಕು ಈ ನಿಟ್ಟಿನಲ್ಲಿ ವನ್ಯಜೀವಿ ಕಾನೂನು ಬದಲಾವಣೆಗೆ ಅವಕಾಶ ನೀಡಬೇಕೆಂದು  ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಸಭೆಯಲ್ಲಿ ವಾದ ಮಂಡಿಸಿದ್ದಾರೆ.

ಬೆಳೆಹಾನಿ ಮಾಡುವ ಕಾಡು ಹಂದಿಯನ್ನು ರೈತರು ಗುಂಡು ಹೊಡೆದು ಸಾಯಿಸಿದ ಪ್ರಕರಣಗಳಲ್ಲಿ ಅವುಗಳ ಮಾಂಸವನ್ನು ಅವರು ತಿನ್ನಲು ಅವಕಾಶ ನೀಡಬೇಕು ಆಗ್ರಹಿಸಿದ್ದಾರೆ.

ಪ್ರಶೋತ್ತರ ಅವಧಿಯಲ್ಲಿ ವನ್ಯಜೀವಿ- ಮಾನವ ಸಂಘರ್ಷದ ಕುರಿತ ಚರ್ಚೆಯಲ್ಲಿ ಮಧ್ಯ ಪ್ರವೇಶ ಮಾಡಿದ ಅವರು, ‘ಬೆಳೆ ಹಾನಿ ಮಾಡುವ ಕಾಡು ಹಂದಿಗೆ ಗುಂಡು ಹೊಡೆದು ಸಾಯಿಸಲು ಅರಣ್ಯ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಹಂದಿಯ ಮಾಂಸ ತಿನ್ನುವಂತಿಲ್ಲ. ಈ ರೀತಿ ಹಂದಿ ಮಾಂಸ ಕತ್ತರಿಸುತ್ತಿದ್ದ ನನ್ನ ಕ್ಷೇತ್ರದ ಜನರನ್ನು ಬಂಧಿಸಲಾಗಿದೆ. ಇಂತಹ ಕಾನೂನನ್ನು ಮೊದಲು ಬದಲಾವಣೆ ಮಾಡಿ’ ಎಂದು ಒತ್ತಾಯಿಸಿದರು.

ಕಾಡುಹಂದಿಯ ಮಾಂಸ ತಿನ್ನಲು ಯತ್ನಿಸಿದರು ಎಂಬ ಕಾರಣಕ್ಕೆ ರೈತರನ್ನು ಬಂಧಿಸುವುದು ಯಾವ ನ್ಯಾಯ? ಇದು ಎಂಥಹ ಕಾನೂನು ಎಂದು ಪ್ರಶ್ನಿಸಿದರು.

ಮಂಗ, ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿಗಳ ಹಾವಳಿಯಿಂದ ರೈತರು ಬದುಕುವುದೇ ಕಷ್ಟವಾಗಿದೆ. ಬೆಳೆ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ವನ್ಯಜೀವಿ ಹಾವಳಿ ತಡೆಗೆ ಸರ್ಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/4444

Related Articles

Leave a Reply

Your email address will not be published. Required fields are marked *

Back to top button