ಸಂಸದರ ಭಾಷಣದ ನಂತರ ಕುರ್ಚಿಗಳು ಖಾಲಿ!
ಸುದ್ದಿಲೈವ್/ಶಿವಮೊಗ್ಗ
ನಗರದ ಸೈನ್ಸ್ ಮೈದಾನದಲ್ಲಿ ನಡೆಯುತ್ತಿದ್ದ ಪೇಜ್ ಪ್ರಮುಖರ ಸಭೆಯಲ್ಲಿ ಬಿಜೆಪಿ ಕ್ಲಸ್ಟರ್ ಗಳ ಪ್ರಮುಖ ಭಾನುಪ್ರಕಾಶ್ ಮಾತನಾಡುವ ವೇಳೆ ಕಾರ್ಯಕರ್ತರು ಎದ್ದು ಹೋಗಿರುವ ಘಟನೆ ನಡೆದಿದೆ.
ಅತಿ ಶಿಸ್ತಿನ ಪಕ್ಷ ಎನಿಸಿಕೊಳ್ಳುವ ಬಿಜೆಪಿಯಲ್ಲಿ ಈ ರೀತಿ ಘಟನೆ ಅಪರೂಪವಾದರೂ ಇಂದು ನಡೆದ ಘಟನೆ ಅಶಿಸ್ತನ್ನ ಎದ್ದು ತೋರಿತ್ತು. ಬಿಜೆಪಿಯ ಪ್ರಮುಖರು ಕಾರ್ಯಕರ್ತರಿಗೆ ಕೂತುಕೊಳ್ಳಲು ಸೂಚನೆ ನೀಡಿದರು ಕಾರ್ಯಕರ್ತರು ಹೊರಗೆ ಹೋದರು.
ಸಂಜೆ 5 ಗಂಟೆಗೆ ಕಾರ್ಯಕರ್ತರಿಗೆ ಮೈದಾನಕ್ಕೆ ಬರಲು ಸೂಚಿಲಾಗಿತ್ತು. ಆದರೆ ಕಾರ್ಯಕ್ರಮ ಆರಂಭವಾಗಿದ್ದು 6-40 ಕ್ಕೆ ಇದರಿಂದ ಭಾರಿ ಸಂಖ್ಯೆಯಲ್ಲಿ ಬಂದ ಮಹಿಳಾ ಕಾರ್ಯಕರ್ತರು ಭಾನುಪ್ರಕಾಶ್ ಭಾಷಣಕ್ಕೆ ಬರುತ್ತಿದ್ದಂತೆ ಎದ್ದು ಹೋದರು.
ಸಂಸದ ರಾಘವೇಂದ್ರ ಅವರ 25 ನಿಮಿಷದ ಭಾಷಣದ ನಂತರ ಭಾನುಪ್ರಕಾಶ್ ಮಾತನಾಡಲು ಪೋಡಿಯಂಗೆ ಬರುತ್ತಿದ್ದಂತೆ ಕುರ್ಚಿಗಳೆಲ್ಲಾ ಖಾಲಿ ಖಾಲಿಯಾದವು. ಐದು ಸಾವಿರಕ್ಕೂ ಹೆಚ್ಚುಜನ ಕಾರ್ಯಕ್ರಮದಲ್ಲಿ ಏಕಾಏಕಿ ಎದ್ದು ಹೊರ ಹೋದ ಪರಿಣಾಮ 8-20 ಕ್ಕೆ ಮುಗಿಸಲಾಗಿದೆ.
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆಬಿ ಪ್ರಸನ್ನ ಕುಮಾರ್ ಮಾತನಾಡಿದ ನಂತರ ಭಾಷಣಕ್ಕೆ ಬಂದ ಶಾಸಕ ಚೆನ್ನಬಸಪ್ಪ ವಂದನಾರ್ಪಣೆ ಮಾಡುವುದು ಒಳ್ಳೆಯದೇನೋ ಎಂದು ಉಲ್ಲೇಖಿಸಿ ಭಾಷಣ ಆರಂಭಿಸಿದರು.
ಶಾಸಕಿ ಅನುಪಸ್ಥಿತಿ
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕಿ ಅನುಪಸ್ಥಿತಿಯೂ ಹೆಚ್ಚು ಎದ್ದು ಕಾಣುತ್ತಿತ್ತು.ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆಬಿ ಪ್ರಸನ್ನ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಉಪಾಧ್ಯಕ್ಷ ದೀಪಕ್ ಸಿಂಗ್ ಪೇಜ್ ಪ್ರಮುಖ್ ಸಮಾವೇಶದಲ್ಲಿ ಭಾಗಿಯಾಗಿದ್ದರೂ ಶಾಸಕಿ ಶಾರದಾ ಪೂರ್ಯನಾಯ್ಕ್ ಅನುಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/11822